ಸುದ್ದಿಯಲ್ಲದ ಸುದ್ದಿಯನ್ನು ಸುದ್ದಿ ಮಾಡುವ ಮನುವ್ಯಾಧಿ ಮಿಡಿಯಾಗಳಿಗೆ ಮನುವಾದಿಗಳು ಸಂವಿಧಾನವನ್ನು ಸುಟ್ಟಿದ್ದು ಸುದ್ದಿಯಾಗಲೇ ಇಲ್ಲ, ಬಹುಶಃ ಒಳಗೊಳಗೆ ಖುಷಿಯಾಗಿ ಒಂದೆರಡು ಲೀಟರ್ ಗೋಮೂತ್ರ, ಎರಡ್ಮೂರು ಬುಟ್ಟಿ ಸೆಗಣಿಯನ್ನು ಜಾಸ್ತಿ ತಿಂದಿರಬೇಕು. ಅಷ್ಟಕ್ಕೂ ಸಂವಿಧಾನವನ್ನು ಯಾವ ಕಾರಣಕ್ಕೆ ಈ ಶತಮೂರ್ಖರು ಸುಟ್ಟರೆಂಬುದೇ ಮಿಲಿಯನ್ ಡಾಲರ್ ಪ್ರಶ್ನೆ. ಜಗತ್ತಿನ ಅತಿದೊಡ್ಡ ಸಾಮಾಜಿಕ ದಾಖಲೆ, ಭಾರತ ಪ್ರಜಾಪ್ರಭುತ್ವದ ಭದ್ರ ಬುನಾದಿ, ಭಾರತ ಆಡಳಿತದ ಜೀವನ ಮಾರ್ಗ, ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲ ಭಾರತೀಯರಿಗೂ ಘನತೆಯ ಬದುಕು ಬದುಕಲು ಅವಶ್ಯಕವಾದ ಮೂಲಭೂತ ಹಕ್ಕುಗಳನ್ನೂ, ಜನತೆಯ ಕಲ್ಯಾಣಕ್ಕೆ ಅವಶ್ಯಕವಾದ ರಾಜ್ಯನೀತಿ ನಿರ್ದೇಶಕ ತತ್ವಗಳನ್ನೂ, ಒಂದರೊಂದರ ಮೇಲೆ ಸವಾರಿ ಮಾಡದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಗಳನ್ನೂ, ವಿವಿಧ ಸಾಂವಿಧಾನಿಕ ಹುದ್ದೆಗಳು ಮತ್ತು ಸಂಸ್ಥೆಗಳು ಮತ್ತವುಗಳ ಜವಾಬ್ದಾರಿಗಳನ್ನೂ, ಒಕ್ಕೂಟ ವ್ಯವಸ್ಥೆಯನ್ನೆಲ್ಲ ವ್ಯಾಖ್ಯಾನಿಸಿ, ದಾಖಲಿಸಿ, ವಿವರಿಸಿರುವ ಸಂವಿಧಾನ ಸುಟ್ಟವರಿಗೆ ಬಗೆದ ಅಪಚಾರವಾದರೂ ಏನು?? ಮೊದಲು ಮನುಸ್ಮೃತಿಯೂ, ಮಧ್ಯಕಾಲದಲ್ಲಿ ಮುಸಲ್ಮಾನರ ಆಡಳಿತವೂ, ತದನಂತರ ಬ್ರಿಟಿಷರ ಆಡಳಿತವೂ ಭಾರತದ ಆಡಳಿತ ಜೀವನವಿಧಾನವನ್ನು ನಿರ್ಧರಿಸಿ ಭಾರತೀಯರ ಬದುಕನ್ನು, ನಿರ್ಧಿಷ್ಟವಾಗಿ ಸಮಾಜದ ತಳಸಮುದಾಯ, ವರ್ಗಗಳನ್ನು ಅಸಹನೀಯವಾಗಿಸಿದ್ದನ್ನು ಭಾರತೀಯ ಇತಿಹಾಸ ದಾಖಲಿಸಿದೆ. ಬುದ್ಧ, ಬಸವನ ಕ್ರಾಂತಿಗಳ ಭಾಗಶಃ ಸಫ
Site for unveiling the wonders of the world !