ಸುದ್ದಿಯಲ್ಲದ ಸುದ್ದಿಯನ್ನು ಸುದ್ದಿ ಮಾಡುವ ಮನುವ್ಯಾಧಿ ಮಿಡಿಯಾಗಳಿಗೆ ಮನುವಾದಿಗಳು ಸಂವಿಧಾನವನ್ನು ಸುಟ್ಟಿದ್ದು ಸುದ್ದಿಯಾಗಲೇ ಇಲ್ಲ, ಬಹುಶಃ ಒಳಗೊಳಗೆ ಖುಷಿಯಾಗಿ ಒಂದೆರಡು ಲೀಟರ್ ಗೋಮೂತ್ರ, ಎರಡ್ಮೂರು ಬುಟ್ಟಿ ಸೆಗಣಿಯನ್ನು ಜಾಸ್ತಿ ತಿಂದಿರಬೇಕು. ಅಷ್ಟಕ್ಕೂ ಸಂವಿಧಾನವನ್ನು ಯಾವ ಕಾರಣಕ್ಕೆ ಈ ಶತಮೂರ್ಖರು ಸುಟ್ಟರೆಂಬುದೇ ಮಿಲಿಯನ್ ಡಾಲರ್ ಪ್ರಶ್ನೆ.
ಜಗತ್ತಿನ ಅತಿದೊಡ್ಡ ಸಾಮಾಜಿಕ ದಾಖಲೆ, ಭಾರತ ಪ್ರಜಾಪ್ರಭುತ್ವದ ಭದ್ರ ಬುನಾದಿ, ಭಾರತ ಆಡಳಿತದ ಜೀವನ ಮಾರ್ಗ, ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲ ಭಾರತೀಯರಿಗೂ ಘನತೆಯ ಬದುಕು ಬದುಕಲು ಅವಶ್ಯಕವಾದ ಮೂಲಭೂತ ಹಕ್ಕುಗಳನ್ನೂ, ಜನತೆಯ ಕಲ್ಯಾಣಕ್ಕೆ ಅವಶ್ಯಕವಾದ ರಾಜ್ಯನೀತಿ ನಿರ್ದೇಶಕ ತತ್ವಗಳನ್ನೂ, ಒಂದರೊಂದರ ಮೇಲೆ ಸವಾರಿ ಮಾಡದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಗಳನ್ನೂ, ವಿವಿಧ ಸಾಂವಿಧಾನಿಕ ಹುದ್ದೆಗಳು ಮತ್ತು ಸಂಸ್ಥೆಗಳು ಮತ್ತವುಗಳ ಜವಾಬ್ದಾರಿಗಳನ್ನೂ, ಒಕ್ಕೂಟ ವ್ಯವಸ್ಥೆಯನ್ನೆಲ್ಲ ವ್ಯಾಖ್ಯಾನಿಸಿ, ದಾಖಲಿಸಿ, ವಿವರಿಸಿರುವ ಸಂವಿಧಾನ ಸುಟ್ಟವರಿಗೆ ಬಗೆದ ಅಪಚಾರವಾದರೂ ಏನು??
ಮೊದಲು ಮನುಸ್ಮೃತಿಯೂ, ಮಧ್ಯಕಾಲದಲ್ಲಿ ಮುಸಲ್ಮಾನರ ಆಡಳಿತವೂ, ತದನಂತರ ಬ್ರಿಟಿಷರ ಆಡಳಿತವೂ ಭಾರತದ ಆಡಳಿತ ಜೀವನವಿಧಾನವನ್ನು ನಿರ್ಧರಿಸಿ ಭಾರತೀಯರ ಬದುಕನ್ನು, ನಿರ್ಧಿಷ್ಟವಾಗಿ ಸಮಾಜದ ತಳಸಮುದಾಯ, ವರ್ಗಗಳನ್ನು ಅಸಹನೀಯವಾಗಿಸಿದ್ದನ್ನು ಭಾರತೀಯ ಇತಿಹಾಸ ದಾಖಲಿಸಿದೆ. ಬುದ್ಧ, ಬಸವನ ಕ್ರಾಂತಿಗಳ ಭಾಗಶಃ ಸಫಲತೆಯ ನಂತರ ಭಾರತೀಯ ಸಮಾಜವನ್ನು ಅಮೂಲಾಗ್ರವಾಗಿ ಬದಲಾವಣೆಗೆ ಒಳಪಡಿಸಿ ಯಶಸ್ವಿಯಾದ ಕೀರ್ತಿ ಒಬ್ಬನೇ ಒಬ್ಬ ವ್ಯಕ್ತಿಗೆ ಸಲ್ಲುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ ಅದು-
"ಡಾ. ಬಾಬಾ ಸಾಹೇಬ್ ಅಂಬೇಡ್ಕರ್ "
ಭಾರತದ ಇದುವರೆಗಿನ ಆಡಳಿತದಲ್ಲಿ ಒಂದೇ ಒಂದು ವ್ಯವಸ್ಥೆಯನ್ನು ಹದಗೆಡಿಸುವ ರಾಜಕೀಯ ವಿಪ್ಲವ, ಪಲ್ಲಟಗಳೇ ಘಟಿಸಿಲ್ಲ, ಪ್ರಜಾಪ್ರಭುತ್ವ ಸಾಧ್ಯವಾದಷ್ಟು ಬಲಿಷ್ಠವಾಗಿ ಮುಂದುವರೆದಿದೆ ಎಂದರೆ ಅದರ ಶ್ರೇಯಸ್ಸು ನಿಸ್ಸಂದೇಹವಾಗಿ ಸಂವಿಧಾನ ಅಥವಾ ಅಂಬೇಡ್ಕರ್ರವರಿಗೆ ಸಲ್ಲಬೇಕು. ಈ ನಿಟ್ಟಿನಲ್ಲಿ ಭಾರತೀಯರೆಲ್ಲ ಅಂಬೇಡ್ಕರ್ರವರಿಗೆ ಚಿರಋಣಿಯಾಗಿರಲೇಬೇಕು.
ಸಂವಿಧಾನ ಅಥವಾ ಅಂಬೇಡ್ಕರ್ರವರನ್ನು ಅರಿಯದೇ ಮಾತಾನಾಡುವ ಮೂರ್ಖರನ್ನು ಕಂಡರೆ ಅಯ್ಯೋ ಎನಿಸುತ್ತದೆ, ಅಷ್ಟೇ ಕೋಪವೂ ಬರುತ್ತದೆ. ಇವರದ್ದು ಕೇವಲ ವಿರೋಧಕ್ಕಾಗಿ ವಿರೋಧ! ನೀವು ಸಂವಿಧಾನವನ್ನು ಸುಟ್ಟಿರಾದರೆ ಅದು ನಿಮಗೆ, ನಿಮ್ಮವರಿಗೆ ಕೊಡಮಾಡಿದ ಜೀವಿಸುವ ಹಕ್ಕನ್ನೊಳಗೊಂಡಂತೆ ಎಲ್ಲ ಮೂಲಭೂತ ಹಕ್ಕುಗಳನ್ನೂ ತಿರಸ್ಕರಿಸಿದಂತೆ!!ಭಾರತದ ಅಖಂಡತೆಯನ್ನು, ಸಾರ್ವಭೌಮತ್ವವನ್ನು ಪ್ರಶ್ನಿಸಿದಂತೆ!!!
ನಿಮಗೆಲ್ಲ ಮೂಲಭೂತ ಹಕ್ಕು ಕೊಟ್ಟಿದ್ದು ತಪ್ಪಾ? ನಿಮಗೆಲ್ಲ ಸಮಾನ ಅವಕಾಶ, ಕಾನೂನಿನ ಮುಂದೆ ಸಮಾನತೆ ಕೊಟ್ಟಿದ್ದು ತಪ್ಪಾ? ನಿಮಗೆಲ್ಲ ವಾಕ್ ಸ್ವಾತಂತ್ರ್ಯ ನೀಡಿದ್ದು ತಪ್ಪಾ? ನಿಮಗೆಲ್ಲ ಶಿಕ್ಷಣ ಪಡೆಯುವ ಹಕ್ಕು ನೀಡಿದ್ದು ತಪ್ಪಾ? ನಿಮಗೆಲ್ಲ ನಿಮ್ನಿಮ್ಮ ಧರ್ಮಾಚರಣೆಯ ಸ್ವಾತಂತ್ರ್ಯ ನೀಡಿದ್ದು ತಪ್ಪಾ? ನಿಮ್ಮ ಅಭ್ಯುದಯಕ್ಕೆ ಸರಕಾರಕ್ಕೆ ಮಾರ್ಗಸೂಚಿಗಳನ್ನು ಒದಗಿಸಿದ್ದು ತಪ್ಪಾ? ನಿಮಗೆಲ್ಲ ಘನತೆಯ, ಸಮಾನತೆಯ, ಸ್ವಾತಂತ್ರ್ಯದ, ಭ್ರಾತೃತ್ವದ ಬದುಕು ಬದುಕಲು ಅವಕಾಶ ನೀಡಿದ್ದೇ ತಪ್ಪಾ? ಸಂವಿಧಾನ ಮಾಡಿದ ತಪ್ಪಾದರೂ ಏನು??
ಸಂವಿಧಾನವೆಂದರೆ ಬರೀ ಮಿಸಲಾತಿಯ ದಾಖಲೆಯಲ್ಲ ಮೂರ್ಖರೇ!! ಅಷ್ಟಕ್ಕೂ positive descrimination ಬಗ್ಗೆ ನೀವು ಸರಿಯಾಗಿ ಅಧ್ಯಯನ ಮಾಡಿದ್ದೇ ಆದರೆ ಮೀಸಲಾತಿಯ ಕಾರಣಕ್ಕೆ ಸಂವಿಧಾನವನ್ನು ವಿರೋಧಿಸುವ ನೀಚತನಕ್ಕೆ ಇಳಿಯುವ ಕೆಲಸಕ್ಕೆ ಮಾಡಲಾರಿರಿ, ಎಲ್ಲ ತಿಳಿದೂ- ತಿಳಿದು ಆ ಕೆಲಸಕ್ಕೆ ಇಳಿದರೆ ನಿಮ್ಮನ್ನು ಬೈಯ್ಯಲು ನನ್ನ ಬಳಿ ಯಾವ ಕೆಟ್ಟ ಬೈಗುಳಗಳೂ ಉಳಿಯುವುದಿಲ್ಲ,ಆ ಬೈಗುಳಗಳಿಗೂ ನೀವು ಯೋಗ್ಯರಲ್ಲ.
ಅಷ್ಟಕ್ಕೂ ಈಗಿರುವ ಸರ್ವೋದಯ ಸಂವಿಧಾನಕ್ಕೆ ಪರ್ಯಾಯವಾಗಿ ಅಥವಾ ಅದಕ್ಕೂ ಅತ್ಯುನ್ನತವಾಗಿ ಸಂವಿಧಾನ ಬರೆಯುವ ಬುದ್ಧಿಮಟ್ಟ ಸುಟ್ಟ ನಪುಂಸಕರಾದ ನಿಮ್ಮಲ್ಲಿ ಯಾರಿಗಾದರೂ ಇದೆಯೇ? ಅಥವಾ ನಿಮಗೆ ಪ್ರಚೋದನೆ ನೀಡಿದ ನಿಮ್ಮ ಆ ಬೌದ್ಧಿಕ ಅಪ್ಪಂದಿರಿಗೆ ಆ ತಾಕತ್ತು ಇದೆಯೇ?
ಲಾಸ್ಟ ಡ್ರಾಪ್: ಅಂದಹಾಗೆ, ಭಾರತೀಯರಿಗೆ ಅಂಬೇಡ್ಕರ್ರವರ ಕೊಡುಗೆ ಕೇವಲ ಸಂವಿಧಾನ ಮಾತ್ರವಲ್ಲ, ಭಾರತದ ಅರ್ಥಶಾಸ್ತ್ರ , ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಕಾನೂನು, ತತ್ವಶಾಸ್ತ್ರ, ಇತಿಹಾಸಕ್ಕೆ ಅಂಬೇಡ್ಕರರ ಕೊಡುಗೆಯಿದೆ. ಒಟ್ಟಾರೆಯಾಗಿ ಆಧುನಿಕ ಭಾರತದ ನಿಜವಾದ ಜನಕ ಡಾ. ಅಂಬೇಡ್ಕರ್ ಎಂಬುದರಲ್ಲಿ ಎರಡು ಮಾತಿಲ್ಲ. ಅವರೆಂದಿಗೂ ಭಾರತದ ಭಾಗ್ಯವಿಧಾತ!!!
ಓಯ್ ಫೇಕೂ ದೇಶಭಕ್ತರೇ ಎಲ್ಲಿ ಆಯ್ಕೋಂಡ್ ತಿನ್ಲಿಕ್ಕೆ ಹೋಗೀದೀರ, ಸಂವಿಧಾನ ದಹನ ದೇಶದ್ರೋಹ ಅಲ್ಲವೇ..??
ಜಗತ್ತಿನ ಅತಿದೊಡ್ಡ ಸಾಮಾಜಿಕ ದಾಖಲೆ, ಭಾರತ ಪ್ರಜಾಪ್ರಭುತ್ವದ ಭದ್ರ ಬುನಾದಿ, ಭಾರತ ಆಡಳಿತದ ಜೀವನ ಮಾರ್ಗ, ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲ ಭಾರತೀಯರಿಗೂ ಘನತೆಯ ಬದುಕು ಬದುಕಲು ಅವಶ್ಯಕವಾದ ಮೂಲಭೂತ ಹಕ್ಕುಗಳನ್ನೂ, ಜನತೆಯ ಕಲ್ಯಾಣಕ್ಕೆ ಅವಶ್ಯಕವಾದ ರಾಜ್ಯನೀತಿ ನಿರ್ದೇಶಕ ತತ್ವಗಳನ್ನೂ, ಒಂದರೊಂದರ ಮೇಲೆ ಸವಾರಿ ಮಾಡದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಗಳನ್ನೂ, ವಿವಿಧ ಸಾಂವಿಧಾನಿಕ ಹುದ್ದೆಗಳು ಮತ್ತು ಸಂಸ್ಥೆಗಳು ಮತ್ತವುಗಳ ಜವಾಬ್ದಾರಿಗಳನ್ನೂ, ಒಕ್ಕೂಟ ವ್ಯವಸ್ಥೆಯನ್ನೆಲ್ಲ ವ್ಯಾಖ್ಯಾನಿಸಿ, ದಾಖಲಿಸಿ, ವಿವರಿಸಿರುವ ಸಂವಿಧಾನ ಸುಟ್ಟವರಿಗೆ ಬಗೆದ ಅಪಚಾರವಾದರೂ ಏನು??
ಮೊದಲು ಮನುಸ್ಮೃತಿಯೂ, ಮಧ್ಯಕಾಲದಲ್ಲಿ ಮುಸಲ್ಮಾನರ ಆಡಳಿತವೂ, ತದನಂತರ ಬ್ರಿಟಿಷರ ಆಡಳಿತವೂ ಭಾರತದ ಆಡಳಿತ ಜೀವನವಿಧಾನವನ್ನು ನಿರ್ಧರಿಸಿ ಭಾರತೀಯರ ಬದುಕನ್ನು, ನಿರ್ಧಿಷ್ಟವಾಗಿ ಸಮಾಜದ ತಳಸಮುದಾಯ, ವರ್ಗಗಳನ್ನು ಅಸಹನೀಯವಾಗಿಸಿದ್ದನ್ನು ಭಾರತೀಯ ಇತಿಹಾಸ ದಾಖಲಿಸಿದೆ. ಬುದ್ಧ, ಬಸವನ ಕ್ರಾಂತಿಗಳ ಭಾಗಶಃ ಸಫಲತೆಯ ನಂತರ ಭಾರತೀಯ ಸಮಾಜವನ್ನು ಅಮೂಲಾಗ್ರವಾಗಿ ಬದಲಾವಣೆಗೆ ಒಳಪಡಿಸಿ ಯಶಸ್ವಿಯಾದ ಕೀರ್ತಿ ಒಬ್ಬನೇ ಒಬ್ಬ ವ್ಯಕ್ತಿಗೆ ಸಲ್ಲುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ ಅದು-
"ಡಾ. ಬಾಬಾ ಸಾಹೇಬ್ ಅಂಬೇಡ್ಕರ್ "
ಭಾರತದ ಇದುವರೆಗಿನ ಆಡಳಿತದಲ್ಲಿ ಒಂದೇ ಒಂದು ವ್ಯವಸ್ಥೆಯನ್ನು ಹದಗೆಡಿಸುವ ರಾಜಕೀಯ ವಿಪ್ಲವ, ಪಲ್ಲಟಗಳೇ ಘಟಿಸಿಲ್ಲ, ಪ್ರಜಾಪ್ರಭುತ್ವ ಸಾಧ್ಯವಾದಷ್ಟು ಬಲಿಷ್ಠವಾಗಿ ಮುಂದುವರೆದಿದೆ ಎಂದರೆ ಅದರ ಶ್ರೇಯಸ್ಸು ನಿಸ್ಸಂದೇಹವಾಗಿ ಸಂವಿಧಾನ ಅಥವಾ ಅಂಬೇಡ್ಕರ್ರವರಿಗೆ ಸಲ್ಲಬೇಕು. ಈ ನಿಟ್ಟಿನಲ್ಲಿ ಭಾರತೀಯರೆಲ್ಲ ಅಂಬೇಡ್ಕರ್ರವರಿಗೆ ಚಿರಋಣಿಯಾಗಿರಲೇಬೇಕು.
ಸಂವಿಧಾನ ಅಥವಾ ಅಂಬೇಡ್ಕರ್ರವರನ್ನು ಅರಿಯದೇ ಮಾತಾನಾಡುವ ಮೂರ್ಖರನ್ನು ಕಂಡರೆ ಅಯ್ಯೋ ಎನಿಸುತ್ತದೆ, ಅಷ್ಟೇ ಕೋಪವೂ ಬರುತ್ತದೆ. ಇವರದ್ದು ಕೇವಲ ವಿರೋಧಕ್ಕಾಗಿ ವಿರೋಧ! ನೀವು ಸಂವಿಧಾನವನ್ನು ಸುಟ್ಟಿರಾದರೆ ಅದು ನಿಮಗೆ, ನಿಮ್ಮವರಿಗೆ ಕೊಡಮಾಡಿದ ಜೀವಿಸುವ ಹಕ್ಕನ್ನೊಳಗೊಂಡಂತೆ ಎಲ್ಲ ಮೂಲಭೂತ ಹಕ್ಕುಗಳನ್ನೂ ತಿರಸ್ಕರಿಸಿದಂತೆ!!ಭಾರತದ ಅಖಂಡತೆಯನ್ನು, ಸಾರ್ವಭೌಮತ್ವವನ್ನು ಪ್ರಶ್ನಿಸಿದಂತೆ!!!
ನಿಮಗೆಲ್ಲ ಮೂಲಭೂತ ಹಕ್ಕು ಕೊಟ್ಟಿದ್ದು ತಪ್ಪಾ? ನಿಮಗೆಲ್ಲ ಸಮಾನ ಅವಕಾಶ, ಕಾನೂನಿನ ಮುಂದೆ ಸಮಾನತೆ ಕೊಟ್ಟಿದ್ದು ತಪ್ಪಾ? ನಿಮಗೆಲ್ಲ ವಾಕ್ ಸ್ವಾತಂತ್ರ್ಯ ನೀಡಿದ್ದು ತಪ್ಪಾ? ನಿಮಗೆಲ್ಲ ಶಿಕ್ಷಣ ಪಡೆಯುವ ಹಕ್ಕು ನೀಡಿದ್ದು ತಪ್ಪಾ? ನಿಮಗೆಲ್ಲ ನಿಮ್ನಿಮ್ಮ ಧರ್ಮಾಚರಣೆಯ ಸ್ವಾತಂತ್ರ್ಯ ನೀಡಿದ್ದು ತಪ್ಪಾ? ನಿಮ್ಮ ಅಭ್ಯುದಯಕ್ಕೆ ಸರಕಾರಕ್ಕೆ ಮಾರ್ಗಸೂಚಿಗಳನ್ನು ಒದಗಿಸಿದ್ದು ತಪ್ಪಾ? ನಿಮಗೆಲ್ಲ ಘನತೆಯ, ಸಮಾನತೆಯ, ಸ್ವಾತಂತ್ರ್ಯದ, ಭ್ರಾತೃತ್ವದ ಬದುಕು ಬದುಕಲು ಅವಕಾಶ ನೀಡಿದ್ದೇ ತಪ್ಪಾ? ಸಂವಿಧಾನ ಮಾಡಿದ ತಪ್ಪಾದರೂ ಏನು??
ಸಂವಿಧಾನವೆಂದರೆ ಬರೀ ಮಿಸಲಾತಿಯ ದಾಖಲೆಯಲ್ಲ ಮೂರ್ಖರೇ!! ಅಷ್ಟಕ್ಕೂ positive descrimination ಬಗ್ಗೆ ನೀವು ಸರಿಯಾಗಿ ಅಧ್ಯಯನ ಮಾಡಿದ್ದೇ ಆದರೆ ಮೀಸಲಾತಿಯ ಕಾರಣಕ್ಕೆ ಸಂವಿಧಾನವನ್ನು ವಿರೋಧಿಸುವ ನೀಚತನಕ್ಕೆ ಇಳಿಯುವ ಕೆಲಸಕ್ಕೆ ಮಾಡಲಾರಿರಿ, ಎಲ್ಲ ತಿಳಿದೂ- ತಿಳಿದು ಆ ಕೆಲಸಕ್ಕೆ ಇಳಿದರೆ ನಿಮ್ಮನ್ನು ಬೈಯ್ಯಲು ನನ್ನ ಬಳಿ ಯಾವ ಕೆಟ್ಟ ಬೈಗುಳಗಳೂ ಉಳಿಯುವುದಿಲ್ಲ,ಆ ಬೈಗುಳಗಳಿಗೂ ನೀವು ಯೋಗ್ಯರಲ್ಲ.
ಅಷ್ಟಕ್ಕೂ ಈಗಿರುವ ಸರ್ವೋದಯ ಸಂವಿಧಾನಕ್ಕೆ ಪರ್ಯಾಯವಾಗಿ ಅಥವಾ ಅದಕ್ಕೂ ಅತ್ಯುನ್ನತವಾಗಿ ಸಂವಿಧಾನ ಬರೆಯುವ ಬುದ್ಧಿಮಟ್ಟ ಸುಟ್ಟ ನಪುಂಸಕರಾದ ನಿಮ್ಮಲ್ಲಿ ಯಾರಿಗಾದರೂ ಇದೆಯೇ? ಅಥವಾ ನಿಮಗೆ ಪ್ರಚೋದನೆ ನೀಡಿದ ನಿಮ್ಮ ಆ ಬೌದ್ಧಿಕ ಅಪ್ಪಂದಿರಿಗೆ ಆ ತಾಕತ್ತು ಇದೆಯೇ?
ಲಾಸ್ಟ ಡ್ರಾಪ್: ಅಂದಹಾಗೆ, ಭಾರತೀಯರಿಗೆ ಅಂಬೇಡ್ಕರ್ರವರ ಕೊಡುಗೆ ಕೇವಲ ಸಂವಿಧಾನ ಮಾತ್ರವಲ್ಲ, ಭಾರತದ ಅರ್ಥಶಾಸ್ತ್ರ , ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಕಾನೂನು, ತತ್ವಶಾಸ್ತ್ರ, ಇತಿಹಾಸಕ್ಕೆ ಅಂಬೇಡ್ಕರರ ಕೊಡುಗೆಯಿದೆ. ಒಟ್ಟಾರೆಯಾಗಿ ಆಧುನಿಕ ಭಾರತದ ನಿಜವಾದ ಜನಕ ಡಾ. ಅಂಬೇಡ್ಕರ್ ಎಂಬುದರಲ್ಲಿ ಎರಡು ಮಾತಿಲ್ಲ. ಅವರೆಂದಿಗೂ ಭಾರತದ ಭಾಗ್ಯವಿಧಾತ!!!
ಓಯ್ ಫೇಕೂ ದೇಶಭಕ್ತರೇ ಎಲ್ಲಿ ಆಯ್ಕೋಂಡ್ ತಿನ್ಲಿಕ್ಕೆ ಹೋಗೀದೀರ, ಸಂವಿಧಾನ ದಹನ ದೇಶದ್ರೋಹ ಅಲ್ಲವೇ..??
Comments
Post a Comment