Skip to main content

ಬಸವ ತತ್ವಗಳೆಂಬ ಕ್ರಾಂತಿಯ ಬೀಜಗಳು ಮತ್ತವುಗಳ ಮರುವ್ಯಾಖ್ಯಾನದ ಅವಶ್ಯಕತೆ

ಬಸವಣ್ಣನವರನ್ನು ಎತ್ತನ್ನಾಗಿಸಿ ಪೂಜಿಸುತ್ತಿರುವವರ ಬಗ್ಗೆ ತೀವ್ರ ತೆರನಾದ ಅನುಕಂಪವೂ, ಸಿಟ್ಟೂ ಎರಡೂ ಇವೆ. ಈ ತೆರನಾದ ಆಚರಣೆಗಳು, ಬಸವ ತತ್ವಗಳನ್ನು ಮೂಲೆಗುಂಪಾಗಿಸುವ ಮುಂದುವರೆದ ಭಾಗಗಳೂ, ಬಸವನೆಂಬ ಮಹಾಮಾನವತಾವಾದಿಗೆ ಎಸಗುವ ಬಹುದೊಡ್ಡ ಅಪಚಾರಗಳೂ ಎಂದು ನಾನು ಪರಿಭಾವಿಸುತ್ತೇನೆ.

ಬಸವಣ್ಣನ ಬಹುಮುಖ ವ್ಯಕ್ತಿತ್ವವನ್ನು ತಲೆಮಾರುಗಳಿಗೆ ಕಟ್ಟಿಕೊಡುವಲ್ಲಿ ಇಡೀ ಸಮಾಜ ಸೋತಿದೆ ಅಥವಾ ಬೇಕೆಂದೇ ಬದಿಗಿರಿಸಿದೆ. ಉದಾಹರಣೆಗೆ ನಾವೋದುತ್ತಿರುವ ಪಠ್ಯ ಪುಸ್ತಕಗಳಲ್ಲಿ ಬಸವಣ್ಣನವರನ್ನು ಕೇವಲ ಶಂಕರ, ರಾಮಾನುಜ, ವಿದ್ಯಾರಣ್ಯರ ಸಾಲಿನಲ್ಲಿ ಬರುವ ಒಬ್ಬ ಸಮಾಜ ಸುಧಾರಕನನ್ನಾಗಿಯೋ ಇಲ್ಲ, ಕೇವಲ ಭಕ್ತಿ ಪಂಥದಲ್ಲಿ ಬರುವ ಭಕ್ತನನ್ನಾಗಿಯೋ ಬಿಂಬಿಸಲಾಗಿದೆಯೇ ವಿನಃ ಬಸವಣ್ಣನ ಬಹುಮುಖ ವ್ಯಕ್ತಿತ್ವವನ್ನು, ಅವರ ಮಾನವತೆ ಪರ ವಿಚಾರಗಳನ್ನು ತೆರೆದಿಡುವಲ್ಲಿನ ಸೋಲು ಅದನ್ನೋದುವ ತಲೆಮಾರುಗಳ ದಿಕ್ಕು ತಪ್ಪಿಸಿದೆ ಮತ್ತು ಅದರ ಪರಿಣಾಮವನ್ನು ನಾವೀಗ ಅನುಭವಿಸುತ್ತಿದ್ದೇವೆ.

ಅವರ ಸಾವಿರಾರು ವಚನಗಳೇ ಅವರ ಬಹುಮುಖ ವ್ಯಕ್ತಿತ್ವವನ್ನು ಅನಾವರಣಗೊಳಿಸಿವೆ. ಅವರು ಕೇವಲ ಭಕ್ತಿ ಭಂಡಾರಿಯಲ್ಲ ಅವರಲ್ಲೊಬ್ಬ ನಿಜವಾದ...

1. ಸಮಾಜವಾದಿ
2. ಜಾತ್ಯಾತೀತವಾದಿ
3. ಮಾನವತಾವಾದಿ
4. ಸ್ತ್ರೀವಾದಿ
5. ವಿಚಾರವಾದಿ
6. ಸಮಾಜ ಶಾಸ್ತ್ರಜ್ಞ
7. ರಾಜ್ಯ ಶಾಸ್ತ್ರಜ್ಞ
8. ಪ್ರಜಾಪ್ರಭುತ್ವವಾದಿ
9. ಕಾಯಕಯೋಗಿ
10. ಕನ್ನಡಾಭಿಮಾನಿ
11.ಸಮಾನತಾವಾದಿ
12.ಉದಾರತಾವಾದಿ
13. ಜನ ನಾಯಕ
14. ಮನಶಾಸ್ತ್ರಜ್ಞ
15.ಅರ್ಥಶಾಸ್ತ್ರಜ್ಞ
16. ಆಧ್ಯಾತ್ಮವಾದಿ
17. ಸಮುದಾಯ ಸಂಘಟಕ
18. ಹೊಸ ಧರ್ಮದ ಪ್ರವಾದಿ
19. ಸಾಹಿತಿ
20. ಶಿಕ್ಷಕ ಇತ್ಯಾದಿ.

ಬಸವಣ್ಣನ ವ್ಯಕ್ತಿತ್ವ ಸಾಗರ, ಈಗ ಅವರ ಬಗ್ಗೆ ಆಗಿರುವ ಸಂಶೋಧನೆಗಳು ಬಹುಶಃ ಅವರ ಬಹುಮುಖ ವ್ಯಕ್ತಿತ್ವದ ಶೇಕಡಾ 1ರಷ್ಟು ಮಾತ್ರ. ಬಹಳ ಹೆಮ್ಮೆಯಿಂದ ಹೇಳಬಹುದು ಅವರ ಕೇವಲ ಒಂದೇ ಒಂದು ವಚನವನ್ನು ವಿಶ್ಲೇಷಿಸಿ ಒಂದಿಡಿ ಪುಸ್ತಕವನ್ನು ಬರೆಯಬಹುದೆಂದು, ಅದು ಬಸವ ತತ್ವಗಳಿಗಿರುವ ತಾಕತ್ತು.  ಬಸವಣ್ಣ ಏರಿದ ಎತ್ತರಕ್ಕೆ ಬಹುಶಃ ಮತ್ತಾರೂ ಏರಲಾರರು. ಬಸವಣ್ಣನಿಗೆ ಬಸವಣ್ಣ ಮಾತ್ರ ಸಾಟಿ.

ಅವರ ಜನಾಕರ್ಷಕ ನಾಯಕತ್ವ ಯಾವಾಗಲೂ ಅಚ್ಚರಿಯ ವಿಷಯ, ಅದು ಹೇಗೆ ಬಸವಣ್ಣ ಧರ್ಮ ಬಾಹಿರ ಜನರನ್ನು ವ್ಯವಸ್ಥಿತವಾಗಿ ಸಂಘಟಿಸಿ ಹೊಸಬೆಳಕನ್ನು ನೀಡಿದರು? ಅದು ಹೇಗೆ ಆಫ್ಘಾನಿಸ್ತಾನ, ಕಾಶ್ಮೀರದವರೆಗೆ ಅವರ ಕೀರ್ತಿ ಹಬ್ಬಿತ್ತು? ಅದು ಹೇಗೆ ಅವರು ಅನುಭವ ಮಂಟಪವೆಂಬ ಪ್ರಜಾಪ್ರಭುತ್ವ ಸಂಸ್ಥೆ ಸ್ಥಾಪಿಸಿದರು? ಅದು ಹೇಗೆ ಅವರು ಪ್ರಭುತ್ವದ ಹಳವಂಡಗಳನ್ನು ದಿಟ್ಟವಾಗಿ ಎದುರಿಸೋ ಎದೆಗಾರಿಕೆ ತೋರಿಸಿದರು? ಅವರೇಕೆ ವ್ಯವಸ್ಥೆಯೊಂದಿಗೆ ಯಾವ ಸಂದರ್ಭ, ಇನ್ನೂ ನಿಖರವಾಗಿ ಹೇಳುವುದಾದರೆ ಪ್ರಾಣಾಪಾಯವಿದ್ದರೂ ರಾಜಿಯಾಗಲಿಲ್ಲ? ಅವರಿಗೇಕೆ ಬೇರೆಯವರ ಹಾಗೆ ಅಧಿಕಾರದ ದರ್ಪ ತಲೆಗೇರಲಿಲ್ಲ? ಅವರಿಗೇಕೆ ಅಂದಿನ ಘೋಷಿತ ತಳಸಮುದಾಯದ ಜನರ ಬಗ್ಗೆ ಸಹಾನುಭೂತಿಯಿತ್ತು? ಅವರೇಕೆ ಕನ್ನಡವನ್ನೇ ಬಳಸಿ, ಬೆಳೆಸಿದರು? ಅವರಿಗೇಕೆ ಶರಣ ಸಮುದಾಯ ಜೀವಕ್ಕೆ ಜೀವ ನೀಡಲೂ ಹಿಂಜರಿಯುತ್ತಿರಲಿಲ್ಲ? ಅವರೇಕೆ ಇಷ್ಟಲಿಂಗ ಸಂಶೋಧಿಸಿದರು? ಅವರೇಕೆ ಶರಣ ಸಮುದಾಯವನ್ನು ಸಾಕ್ಷರ ಸಮುದಾಯವನ್ನಾಗಿಸಿದರು? ಅವರೇಕೆ ಎಲ್ಲರಿಗೂ ಇಷ್ಟಲಿಂಗ ದೀಕ್ಷೆ ನೀಡಿದರು? ಅಪಾರ ಜನಬೆಂಬಲವಿದ್ದರೂ ಬಿಜ್ಜಳನ ನಂತರ ಅವರು ರಾಜಪದವಿ ಸ್ವೀಕರಿಸಲಿಲ್ಲ? ಶರಣರ ಬೇಟೆ ನಡೆದಾಗಲೂ ಅವರೇಕೆ ಎಂದೂ ಸೇಡಿನ ರಾಜಕಾರಣ ಮಾಡಲಿಲ್ಲ?

ಏಕೆಂದರೆ ಅವರು ಮಹಾಮಾನವತಾವಾದಿ, ದೂರದೃಷ್ಟಿಯುಳ್ಳ ಜನನಾಯಕ, ಉನ್ನತ ವಿಚಾರಗಳುಳ್ಳ ಉದಾತ್ತ ಆದರ್ಶವಾದಿ. ಅದಕ್ಕೆ ಹೇಳೋದು ಬಸವಣ್ಣ ಏರಿದ ಎತ್ತರಕ್ಕೆ ಮತ್ತಾರೂ ಏರಲಾರರೆಂದು. ಬಸವ ತತ್ವಗಳನ್ನು ಹುಗಿಯಲು ಯತ್ನಿಸಿದವರಿಗೆ ಅವು ಕ್ರಾಂತಿಯ ಬೀಜಗಳೆಂದು ಗೊತ್ತಿರಲಿಲ್ಲ. ಬಸವಣ್ಣ ಯಾವಾಗಲೂ ಸ್ಫೂರ್ತಿಯ ಚಿಲುಮೆ, ಆದರ್ಶ ನಾಯಕ. ಬಸವಣ್ಣನ ಪ್ರತಿ ಮುಖ ವ್ಯಕ್ತಿತ್ವದ ಅಧ್ಯಯನವೆಂಬುದು ಈ ಹೊತ್ತಿನ ಅಗತ್ಯತೆ ಮತ್ತು ಸ್ಥಾಪಿತ ಹಿತಾಸಕ್ತಿ ತಪ್ಪಾಗಿ ವ್ಯಾಖ್ಯಾನಿಸಿದ ಅವರ ತತ್ವಗಳ ಮರುವ್ಯಾಖ್ಯಾನದ ಭಾಗ.

Comments

Popular posts from this blog

ಭಾರತೀಯ ಸಮಾಜಕಾರ್ಯ ಶಿಕ್ಷಣದ ಪ್ರಸ್ತುತ ಸಮಸ್ಯೆಗಳು

ಪೀಠಿಕೆ:  ಸಮಾಜಕಾರ್ಯ ಕೇವಲ ಒಂದು ವೃತ್ತಿ ಮಾತ್ರವಾಗಿರದೇ ಅದೊಂದು ಶೈಕ್ಷಣಿಕ ಜ್ಞಾನ ಶಾಖೆಯೂ ಆಗಿದೆ. ಸಮಾಜಕಾರ್ಯ ವೃತ್ತಿಯ ಯಶಸ್ಸು, ಸಮಾಜ ಕಾರ್ಯಕರ್ತನಾದವನು ತರಬೇತಿಯ ವೇಳೆ ಎಷ್ಟರ ಮಟ್ಟಿಗೆ ಅದನ್ನು ಸೈದ್ಧಾಂತಿಕವಾಗಿ, ಪ್ರಾಯೋಗಿಕವಾಗಿ ಅರ್ಥೈಸಿಕೊಂಡು, ಅಳವಡಿಸಿಕೊಳ್ಳುತ್ತಾನೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಸಮಾಜಕಾರ್ಯ ಶಿಕ್ಷಣ ಮೂಲತಃ ಪಾಶ್ಚಾತ್ಯರ ಕೊಡುಗೆಯಾದ್ದರಿಂದ ಭಾರತದ ಸಂದರ್ಭದಲ್ಲಿ ಅದರ ಅನ್ವಯಿಸುವಿಕೆ ದೇಶೀಕರಣಗೊಂಡಿಲ್ಲ. ಸಮಾಜಕಾರ್ಯ ಶಿಕ್ಷಣ ಪರಿಚಿತವಾಗಿ ಎಂಟು ದಶಕಗಳೇ ಕಳೆದಿರುವ ಈ ಹೊತ್ತಿನಲ್ಲಿ ಅದು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಆತ್ಮಾವಲೋಕನ ಅಗತ್ಯ  ಮತ್ತು ಅನಿವಾರ್ಯವಾಗಿದೆ. ಸಮಸ್ಯೆಗಳನ್ನು ಪರಿಹರಿಸುವ ವಿಧಾನಗಳಿಗೆ ದಾರಿ ತೊರಿಸುವ ಸಮಾಜಕಾರ್ಯ ಶಿಕ್ಷಣವೇ ಸಮಸ್ಯೆಗಳ ಸುಳಿಗೆ ಸಿಲುಕುತ್ತಿರುವುದು ಕಳವಳಕಾರಿ ಸಂಗತಿ. ಈ ನಿಟ್ಟಿನಲ್ಲಿ ‘ಸಮಾಜ ಕಾರ್ಯ ಶಿಕ್ಷಣದ ಪ್ರಸ್ತುತ ಸಮಸ್ಯೆಗಳ’ ಕುರಿತಾದ ಪ್ರಬಂಧ ಮಂಡನೆ, ಬೆಳಕು ಚೆಲ್ಲುವ ಒಂದು ಚಿಕ್ಕ ಪ್ರಯತ್ನವಾಗಿದೆ. ಭಾರತದಲ್ಲಿ ಸಮಾಜಕಾರ್ಯ ಶಿಕ್ಷಣದ ವಿಕಾಸ ಪ್ರೊ. ಸಂಜಯ ಭಟ್ಟ ಬಹಳ ಸ್ಪಷ್ಟವಾಗಿ ಭಾರತದಲ್ಲಿನ ಸಮಾಜಕಾರ್ಯ ಶಿಕ್ಷಣದ ವಿಕಾಸವನ್ನು ಈ ಕೆಳಗಿನ ಹಂತಗಳಲ್ಲಿ ವರ್ಗೀಕರಿಸಿದ್ದಾರೆ. 1.ಪ್ರಾರಂಭದ ಹಂತ(1936-46): ಈ ಹಂತ ಭಾರತದ ಪ್ರಪ್ರಥಮ ಸಮಾಜಕಾರ್ಯ ಶಾಲೆಯಾದ ‘ಸರ್ ದೊರಾಬ್ಜಿ ಟಾಟಾ ಗ್ರ್ಯಾಜುಯೇಟ್ ಸ್...

ಚತುರ್ದ್ವಂಸಕ ನಾಶ ಅಭಿಯಾನ-ಚೀನಾದ ಸ್ವಯಂಕೃತ ವಿಪತ್ತು!

ಈ ಅಭಿಯಾನ ಚೀನಾದ "ಮುನ್ನಡೆಯ ಮಹಾಜಿಗಿತ" (Great Leap Forward 1958-1962 ) ನೀತಿಯ ಮೊಟ್ಟ ಮೊದಲ ಕ್ರಮವಾಗಿತ್ತು. ಇದರಡಿಯಲ್ಲಿ ಗುರುತಿಸಿದ ಆ ನಾಲ್ಕು ದ್ವಂಸಕಗಳೆಂದರೆ- ಇಲಿ, ನೊಣ, ಸೊಳ್ಳೆ ಮತ್ತು ಗುಬ್ಬಚ್ಚಿ. ಗುಬ್ಬಚ್ಚಿಗಳನ್ನು ನಾಶಪಡಿಸುವ ಅಭಿಯಾನ"ಗುಬ್ಬಚ್ಚಿಗಳ ಹತ್ಯೆಯ ಅಭಿಯಾನ" ಎಂದೇ ಪ್ರಸಿದ್ಧಿಯಾಗಿತ್ತು. ಇದು ತೀವ್ರ ತೆರನಾದ ಪರಿಸರ ಅಸಮತೋಲನಕ್ಕೆ ಕಾರಣವಾಯಿತು. ಚೀನಾದ ಭೀಕರ ಕ್ಷಾಮಕ್ಕೆ ಕಾರಣವಾಯಿತು. ಇದನ್ನರಿತ ಮಾವೋ ತ್ಸೆ ತುಂಗ್ 1960 ರಲ್ಲಿ ಈ ಅಭಿಯಾನದ ಪಟ್ಟಿಯಿಂದ ಗುಬ್ಬಿಯನ್ನು ಕೈಬಿಟ್ಟು ತಿಗಣೆಯನ್ನು ಸೇರಿಸಿದ. "ಚತುರ್ದ್ವಂಸಕ ನಾಶ ಅಭಿಯಾನ"ವನ್ನು ಮಾವೋ ತ್ಸೆ ತುಂಗ್ 1960 ರಲ್ಲಿ  ಮುನ್ನಡೆಯ ಮಹಾಜಿಗಿತ ಎಂಬ ಆರ್ಥಿಕ ನೀತಿಯ ಭಾಗವಾಗಿ ಪರಿಚಯಿಸಿದ.ಇದರ ಮೂಲ ಉದ್ದೇಶ  ರೋಗ ರುಜಿನಗಳನ್ನು ಹರಡುವ ದ್ವಂಸಕಗಳಾದ ಈ ಕೆಳಗಿನ ಜೀವಿಗಳ ನಿರ್ಮೂಲನೆಯಾಗಿತ್ತು. 1. ಸೊಳ್ಳೆ -ಮಲೇರಿಯಾ ವಾಹಕ 2. ಇಲಿ-ಪ್ಲೇಗ್ ವಾಹಕ 3. ವ್ಯಾಪಕ ನೊಣಗಳು 4. ಗುಬ್ಬಚ್ಚಿಗಳು- ಆಹಾರಧಾನ್ಯ ಮತ್ತು ಹಣ್ಣುಗಳ ದ್ವಂಸಕ. ಗುಬ್ಬಚ್ಚಿಗಳು,ರೈತರನ್ನು ಶೋಷಿಸುವ ಬಂಡವಾಳಶಾಹಿತ್ವದ ಜೀವಿಗಳೆಂದು ಚೀನಾ ಸರ್ಕಾರ ಘೋಷಿಸಿತು. ಈ ಅಭಿಯಾನದ ಪರಿಣಾಮವಾಗಿ ಲಕ್ಷಾಂತರ ಗುಬ್ಬಚ್ಚಿಗಳು ಸತ್ತವು. ಅವುಗಳಿಗೆ ಮರದ ಮೇಲೆ ಅಷ್ಟೆ ಅಲ್ಲ ಆಕಾಶದಲ್ಲಿ ಹಾರಾಡಲು ಅವಕಾಶವಿರಲಿಲ್ಲ. ಗುಬ್ಬಚ್ಚಿ ಗೂಡುಗಳನ್ನು, ...

ನಗುವುದೋ, ಅಳುವುದೋ ನೀವೇ ಹೇಳಿ!

 ಇಡೀ ಜಗತ್ತೇ ವಿಜ್ಞಾನ, ತಂತ್ರಜ್ಞಾನ, ವೈಚಾರಿಕತೆ, ವೈಜ್ಞಾನಿಕತೆಯೆಡೆಗೆ ಬಹಳ ತೀವ್ರಗತಿಯಲ್ಲಿ ತೆರೆದುಕೊಳ್ಳುತ್ತಿದೆ. ಪ್ರತಿ ಮಿಲಿ ಸೆಕೆಂಡುಗಳಿಗೂ ತಳಮಟ್ಟದ ಮಾನವ ಜೀವನವನ್ನು ಸುಗಮಗೊಳಿಸಬಲ್ಲ ಸಂಶೋಧನೆಗಳಾಗುತ್ತಿವೆ. ಬದಲಾವಣೆ ಜಗದ ನಿಯಮ, ಜೀವಂತಿಕೆಯ ಲಕ್ಷಣ. ಬದಲಾವಣೆಗೆ ಸ್ಪಂದಿಸದಿರುವಿಕೆ ಜೀವಂತಿಕೆಯ ಲಕ್ಷಣವೇ ಅಲ್ಲ. ಬದಲಾಗದ ಸಮಾಜ ಅವನತಿಯತ್ತ ಸಾಗುತ್ತಿರುವ ಅಥವಾ ಕಾಲಚಕ್ರದಲ್ಲಿ ಹಿಮ್ಮುಖವಾಗಿ ಚಲಿಸುತ್ತಿರುವ ಸಂಕೇತ. ಮಾನವ ಜೀವಿಯ ಪ್ರತಿ ತಲೆಮಾರು ಸಾಧ್ಯವಾದಷ್ಟು ನಾಗರಿಕತೆ ಅಥವಾ ಮಾನವೀಯತೆಯನ್ನು ಗಳಿಸುತ್ತ ಈಗಿರುವ ಮಟ್ಟಕ್ಕೆ ಬಂದು ತಲುಪಿದೆ.ಅಂದರೆ ಮುಮ್ಮುಖ ಚಲನೆ ಎಂಬುದು ಸಾಧ್ಯವಾದಷ್ಟು ಜೀವಪರ. ಬಹಳ ವಿಷಾಧದ ಸಂಗತಿಯೇನೆಂದರೆ ಹಿಮ್ಮುಖವಾಗಿ ಅಥವಾ ಅನಾಗರೀಕತೆಯೆಡೆಗೆ ತಲುಪಲು ಹವಣಿಸುತ್ತಿರುವ ಜಗತ್ತು ಕೂಡ ಇದೆ. ಈ ಹವಣಿಕೆಗೆ ವೇಗವರ್ಧಕವಾಗಿ ವಿಕೃತ, ವಿಕ್ಷಿಪ್ತ ರಾಜಕೀಯ ವ್ಯವಸ್ಥೆಯೂ ಇರುತ್ತದೆ. ಈ ವಿಕ್ಷಿಪ್ತ ಮತ್ತು ವಿಕೃತ ರಾಜಕೀಯ ವ್ಯವಸ್ಥೆ ಸಮಾಜವನ್ನು ತಾನಿರುವ ಮಟ್ಟದಿಂದ ಒಂದು ಹೆಜ್ಜೆ ಮುಂದೆ ಹೋಗಿ ಯೋಚಿಸುವುದನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ. ಬದಲಾಗಿ ಮತ್ತೆ ಹಿಮ್ಮುಖವಾಗಿ ತಳ್ಳುತ್ತದೆ. ಸಮಾಜದ ಮುಮ್ಮುಖ ಚಲನೆ ತನ್ನ ಹಿಡೆನ್ ಅಜೆಂಡಾಗಳಿಗೆ ಎಲ್ಲಿ ಮುಳುವಾಗಿಬಿಡುತ್ತದೋ ಎಂಬ ಭಯವೇ ಇದಕ್ಕೆ ಕಾರಣ. ಚರಿತ್ರೆಯ ಚಿತಾಭಸ್ಮವನ್ನು ಕೆದಕಿ ರಾಮ,ರಾವಣ, ಬಾಬರ, ಟಿಪ್ಪು,  ನೆಹರು, ಗಾಂಧ...