Skip to main content

ಚತುರ್ದ್ವಂಸಕ ನಾಶ ಅಭಿಯಾನ-ಚೀನಾದ ಸ್ವಯಂಕೃತ ವಿಪತ್ತು!


ಈ ಅಭಿಯಾನ ಚೀನಾದ "ಮುನ್ನಡೆಯ ಮಹಾಜಿಗಿತ" (Great Leap Forward 1958-1962) ನೀತಿಯ ಮೊಟ್ಟ ಮೊದಲ ಕ್ರಮವಾಗಿತ್ತು. ಇದರಡಿಯಲ್ಲಿ ಗುರುತಿಸಿದ ಆ ನಾಲ್ಕು ದ್ವಂಸಕಗಳೆಂದರೆ- ಇಲಿ, ನೊಣ, ಸೊಳ್ಳೆ ಮತ್ತು ಗುಬ್ಬಚ್ಚಿ. ಗುಬ್ಬಚ್ಚಿಗಳನ್ನು ನಾಶಪಡಿಸುವ ಅಭಿಯಾನ"ಗುಬ್ಬಚ್ಚಿಗಳ ಹತ್ಯೆಯ ಅಭಿಯಾನ" ಎಂದೇ ಪ್ರಸಿದ್ಧಿಯಾಗಿತ್ತು. ಇದು ತೀವ್ರ ತೆರನಾದ ಪರಿಸರ ಅಸಮತೋಲನಕ್ಕೆ ಕಾರಣವಾಯಿತು. ಚೀನಾದ ಭೀಕರ ಕ್ಷಾಮಕ್ಕೆ ಕಾರಣವಾಯಿತು. ಇದನ್ನರಿತ ಮಾವೋ ತ್ಸೆ ತುಂಗ್ 1960ರಲ್ಲಿ ಈ ಅಭಿಯಾನದ ಪಟ್ಟಿಯಿಂದ ಗುಬ್ಬಿಯನ್ನು ಕೈಬಿಟ್ಟು ತಿಗಣೆಯನ್ನು ಸೇರಿಸಿದ. "ಚತುರ್ದ್ವಂಸಕ ನಾಶ ಅಭಿಯಾನ"ವನ್ನು ಮಾವೋ ತ್ಸೆ ತುಂಗ್ 1960ರಲ್ಲಿ  ಮುನ್ನಡೆಯ ಮಹಾಜಿಗಿತ ಎಂಬ ಆರ್ಥಿಕ ನೀತಿಯ ಭಾಗವಾಗಿ ಪರಿಚಯಿಸಿದ.ಇದರ ಮೂಲ ಉದ್ದೇಶ  ರೋಗ ರುಜಿನಗಳನ್ನು ಹರಡುವ ದ್ವಂಸಕಗಳಾದ ಈ ಕೆಳಗಿನ ಜೀವಿಗಳ ನಿರ್ಮೂಲನೆಯಾಗಿತ್ತು.

1. ಸೊಳ್ಳೆ -ಮಲೇರಿಯಾ ವಾಹಕ
2. ಇಲಿ-ಪ್ಲೇಗ್ ವಾಹಕ
3. ವ್ಯಾಪಕ ನೊಣಗಳು
4. ಗುಬ್ಬಚ್ಚಿಗಳು- ಆಹಾರಧಾನ್ಯ ಮತ್ತು ಹಣ್ಣುಗಳ ದ್ವಂಸಕ.

ಗುಬ್ಬಚ್ಚಿಗಳು,ರೈತರನ್ನು ಶೋಷಿಸುವ ಬಂಡವಾಳಶಾಹಿತ್ವದ ಜೀವಿಗಳೆಂದು ಚೀನಾ ಸರ್ಕಾರ ಘೋಷಿಸಿತು. ಈ ಅಭಿಯಾನದ ಪರಿಣಾಮವಾಗಿ ಲಕ್ಷಾಂತರ ಗುಬ್ಬಚ್ಚಿಗಳು ಸತ್ತವು. ಅವುಗಳಿಗೆ ಮರದ ಮೇಲೆ ಅಷ್ಟೆ ಅಲ್ಲ ಆಕಾಶದಲ್ಲಿ ಹಾರಾಡಲು ಅವಕಾಶವಿರಲಿಲ್ಲ. ಗುಬ್ಬಚ್ಚಿ ಗೂಡುಗಳನ್ನು, ಗೂಡಿನಲ್ಲಿರುವ ಮೊಟ್ಟೆ ಮತ್ತು ಮರಿಗಳನ್ನೂ ನಾಶಪಡಿಸಲಾಯಿತು. ಇದಕ್ಕೆ ಪೂರಕವೆಂಬಂತೆ ಆಕಾಶದಲ್ಲಿ ಹಾರಾಡುವ ಗುಬ್ಬಚ್ಚಿಗಳನ್ನು ಅಲ್ಲಿಂದಲೇ ಹೊಡೆದುರುಳಿಸುವ ತಂತ್ರವನ್ನು ನಾಗರಿಕರು ಕಲಿತರು. ಈ ರೀತಿಯ ಸಮೂಹ ಆಕ್ರಮಣ ಗುಬ್ಬಚ್ಚಿಗಳ ಸಂತತಿಯನ್ನು ಅಳಿವಿನ ಅಂಚಿಗೆ ತಂದು ನಿಲ್ಲಿಸಿತು. ಇದು ಎಷ್ಟು ವಿಕೋಪಕ್ಕೆ ಹೊಯಿತೆಂದರೆ ಸರ್ಕಾರ, ಉದ್ಯಮಗಳು ಮತ್ತು ಶಾಲೆಗಳಲ್ಲಿ ಗುಬ್ಬಿಗಳನ್ನು ಕೊಲ್ಲುವ ಸ್ಪರ್ಧೆಗಳೂ ಏರ್ಪಟ್ಟವು. ಗೆದ್ದವರಿಗೆ ಬಹುಮಾನಗಳನ್ನೂ ನೀಡಲಾಯಿತು.

1960ರಲ್ಲಿ ತ್ಸೋ ಸೀನ್ ಚೆಂಗ್ ಎಂಬ ಪಕ್ಷಿ ತಜ್ಞನ ಪ್ರಭಾವದಿಂದಾಗಿ ಚೀನಾದ ನಾಯಕರು ಗುಬ್ಬಚ್ಚಿಗಳ ಕುರಿತಾದ ತಮ್ಮ  ಮನೋಧೋರಣೆಗಳನ್ನು ಬದಲಾಯಿಸಿಕೊಂಡರು. ಚೆಂಗ್ ನ ಪ್ರಕಾರ ಗುಬ್ಬಚ್ಚಿಗಳು ಕೇವಲ ಧವಸ ಧಾನ್ಯಗಳನ್ನು ಮಾತ್ರವಲ್ಲದೇ ಅವುಗಳಿಗಿಂತ ಹೆಚ್ಚಾಗಿ ಆಹಾರ ಬೆಳೆಗಳನ್ನು ಪಕ್ಷಿಗಳಿಗಿಂತ ಹೆಚ್ಚಾಗಿ ನಾಶಪಡಿಸುವ ಹುಳು ಹುಪ್ಪಟೆಗಳನ್ನೂ ತಿಂದು ಆಹಾರ ಬೆಳೆಗಳನ್ನು ಕಾಪಾಡುವ ರೈತನ ಮಿತ್ರಗಳಾಗಿವೆ ಅಂತ ಬಲವಾಗಿ ಪ್ರತಿಪಾದಿಸಿದನು. ಈತನ ಅಭಿಪ್ರಾಯಕ್ಕೆ ಮನ್ನಣೆ ನೀಡಿದ ಮಾವೋ ಗುಬ್ಬಚ್ಚಿಗಳನ್ನು ಕೊಲೆಗೈಯ್ಯುವ ಅಭಿಯಾನಕ್ಕೆ ತಿಲಾಂಜಲಿ ಇಟ್ಟು ಗುಬ್ಬಚ್ಚಿಗಳ ಸ್ಥಾನಕ್ಕೆ ತಿಗಣೆಗಳನ್ನು ತಳ್ಳಿದ. ಆದರೆ ಅಷ್ಟೊತ್ತಿಗಾಗಲೇ  ಪರಿಸರದ ಅಸಮತೋಲನ ಏರ್ಪಟ್ಟು ಬೆಳೆನಾಶಕ ಹುಳು ಹುಪ್ಪಟೆಗಳ ಸಂಖ್ಯೆ ಅನಿಯಂತ್ರಿತವಾಗಿ ಜಾಸ್ತಿಯಾಗಿ ಆಹಾರಬೆಳೆಗಳನ್ನು ನಾಶಪಡಿಸಿದ್ದವು. ತತ್ಪರಿಣಾಮವಾಗಿ ಚೀನಾದಲ್ಲಿ ಮಹಾಕ್ಷಾಮ(Great China Famine) ತಲೆದೂರಿ 15ರಿಂದ 45 ಮಿಲಿಯನ್ ಜನ ಆಹಾರವಿಲ್ಲದೇ ಸತ್ತು ಹೋದರು.

(ಈ ವಿಪತ್ತಿನ ಬಗ್ಗೆ ಬಗ್ಗೆ ಸಮಯ ಸಿಕ್ಕಾಗ ಮತ್ತೆ ಬರೆಯುವೆ)

Comments

Popular posts from this blog

ಭಾರತೀಯ ಸಮಾಜಕಾರ್ಯ ಶಿಕ್ಷಣದ ಪ್ರಸ್ತುತ ಸಮಸ್ಯೆಗಳು

ಪೀಠಿಕೆ:  ಸಮಾಜಕಾರ್ಯ ಕೇವಲ ಒಂದು ವೃತ್ತಿ ಮಾತ್ರವಾಗಿರದೇ ಅದೊಂದು ಶೈಕ್ಷಣಿಕ ಜ್ಞಾನ ಶಾಖೆಯೂ ಆಗಿದೆ. ಸಮಾಜಕಾರ್ಯ ವೃತ್ತಿಯ ಯಶಸ್ಸು, ಸಮಾಜ ಕಾರ್ಯಕರ್ತನಾದವನು ತರಬೇತಿಯ ವೇಳೆ ಎಷ್ಟರ ಮಟ್ಟಿಗೆ ಅದನ್ನು ಸೈದ್ಧಾಂತಿಕವಾಗಿ, ಪ್ರಾಯೋಗಿಕವಾಗಿ ಅರ್ಥೈಸಿಕೊಂಡು, ಅಳವಡಿಸಿಕೊಳ್ಳುತ್ತಾನೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಸಮಾಜಕಾರ್ಯ ಶಿಕ್ಷಣ ಮೂಲತಃ ಪಾಶ್ಚಾತ್ಯರ ಕೊಡುಗೆಯಾದ್ದರಿಂದ ಭಾರತದ ಸಂದರ್ಭದಲ್ಲಿ ಅದರ ಅನ್ವಯಿಸುವಿಕೆ ದೇಶೀಕರಣಗೊಂಡಿಲ್ಲ. ಸಮಾಜಕಾರ್ಯ ಶಿಕ್ಷಣ ಪರಿಚಿತವಾಗಿ ಎಂಟು ದಶಕಗಳೇ ಕಳೆದಿರುವ ಈ ಹೊತ್ತಿನಲ್ಲಿ ಅದು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಆತ್ಮಾವಲೋಕನ ಅಗತ್ಯ  ಮತ್ತು ಅನಿವಾರ್ಯವಾಗಿದೆ. ಸಮಸ್ಯೆಗಳನ್ನು ಪರಿಹರಿಸುವ ವಿಧಾನಗಳಿಗೆ ದಾರಿ ತೊರಿಸುವ ಸಮಾಜಕಾರ್ಯ ಶಿಕ್ಷಣವೇ ಸಮಸ್ಯೆಗಳ ಸುಳಿಗೆ ಸಿಲುಕುತ್ತಿರುವುದು ಕಳವಳಕಾರಿ ಸಂಗತಿ. ಈ ನಿಟ್ಟಿನಲ್ಲಿ ‘ಸಮಾಜ ಕಾರ್ಯ ಶಿಕ್ಷಣದ ಪ್ರಸ್ತುತ ಸಮಸ್ಯೆಗಳ’ ಕುರಿತಾದ ಪ್ರಬಂಧ ಮಂಡನೆ, ಬೆಳಕು ಚೆಲ್ಲುವ ಒಂದು ಚಿಕ್ಕ ಪ್ರಯತ್ನವಾಗಿದೆ. ಭಾರತದಲ್ಲಿ ಸಮಾಜಕಾರ್ಯ ಶಿಕ್ಷಣದ ವಿಕಾಸ ಪ್ರೊ. ಸಂಜಯ ಭಟ್ಟ ಬಹಳ ಸ್ಪಷ್ಟವಾಗಿ ಭಾರತದಲ್ಲಿನ ಸಮಾಜಕಾರ್ಯ ಶಿಕ್ಷಣದ ವಿಕಾಸವನ್ನು ಈ ಕೆಳಗಿನ ಹಂತಗಳಲ್ಲಿ ವರ್ಗೀಕರಿಸಿದ್ದಾರೆ. 1.ಪ್ರಾರಂಭದ ಹಂತ(1936-46): ಈ ಹಂತ ಭಾರತದ ಪ್ರಪ್ರಥಮ ಸಮಾಜಕಾರ್ಯ ಶಾಲೆಯಾದ ‘ಸರ್ ದೊರಾಬ್ಜಿ ಟಾಟಾ ಗ್ರ್ಯಾಜುಯೇಟ್ ಸ್ಕೂಲ್ ಆಫ್ ಸೋಸಿಯ