ಇಡೀ ಜಗತ್ತೇ ವಿಜ್ಞಾನ, ತಂತ್ರಜ್ಞಾನ, ವೈಚಾರಿಕತೆ, ವೈಜ್ಞಾನಿಕತೆಯೆಡೆಗೆ ಬಹಳ ತೀವ್ರಗತಿಯಲ್ಲಿ ತೆರೆದುಕೊಳ್ಳುತ್ತಿದೆ. ಪ್ರತಿ ಮಿಲಿ ಸೆಕೆಂಡುಗಳಿಗೂ ತಳಮಟ್ಟದ ಮಾನವ ಜೀವನವನ್ನು ಸುಗಮಗೊಳಿಸಬಲ್ಲ ಸಂಶೋಧನೆಗಳಾಗುತ್ತಿವೆ. ಬದಲಾವಣೆ ಜಗದ ನಿಯಮ, ಜೀವಂತಿಕೆಯ ಲಕ್ಷಣ. ಬದಲಾವಣೆಗೆ ಸ್ಪಂದಿಸದಿರುವಿಕೆ ಜೀವಂತಿಕೆಯ ಲಕ್ಷಣವೇ ಅಲ್ಲ. ಬದಲಾಗದ ಸಮಾಜ ಅವನತಿಯತ್ತ ಸಾಗುತ್ತಿರುವ ಅಥವಾ ಕಾಲಚಕ್ರದಲ್ಲಿ ಹಿಮ್ಮುಖವಾಗಿ ಚಲಿಸುತ್ತಿರುವ ಸಂಕೇತ. ಮಾನವ ಜೀವಿಯ ಪ್ರತಿ ತಲೆಮಾರು ಸಾಧ್ಯವಾದಷ್ಟು ನಾಗರಿಕತೆ ಅಥವಾ ಮಾನವೀಯತೆಯನ್ನು ಗಳಿಸುತ್ತ ಈಗಿರುವ ಮಟ್ಟಕ್ಕೆ ಬಂದು ತಲುಪಿದೆ.ಅಂದರೆ ಮುಮ್ಮುಖ ಚಲನೆ ಎಂಬುದು ಸಾಧ್ಯವಾದಷ್ಟು ಜೀವಪರ.
ಬಹಳ ವಿಷಾಧದ ಸಂಗತಿಯೇನೆಂದರೆ ಹಿಮ್ಮುಖವಾಗಿ ಅಥವಾ ಅನಾಗರೀಕತೆಯೆಡೆಗೆ ತಲುಪಲು ಹವಣಿಸುತ್ತಿರುವ ಜಗತ್ತು ಕೂಡ ಇದೆ. ಈ ಹವಣಿಕೆಗೆ ವೇಗವರ್ಧಕವಾಗಿ ವಿಕೃತ, ವಿಕ್ಷಿಪ್ತ ರಾಜಕೀಯ ವ್ಯವಸ್ಥೆಯೂ ಇರುತ್ತದೆ. ಈ ವಿಕ್ಷಿಪ್ತ ಮತ್ತು ವಿಕೃತ ರಾಜಕೀಯ ವ್ಯವಸ್ಥೆ ಸಮಾಜವನ್ನು ತಾನಿರುವ ಮಟ್ಟದಿಂದ ಒಂದು ಹೆಜ್ಜೆ ಮುಂದೆ ಹೋಗಿ ಯೋಚಿಸುವುದನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ. ಬದಲಾಗಿ ಮತ್ತೆ ಹಿಮ್ಮುಖವಾಗಿ ತಳ್ಳುತ್ತದೆ. ಸಮಾಜದ ಮುಮ್ಮುಖ ಚಲನೆ ತನ್ನ ಹಿಡೆನ್ ಅಜೆಂಡಾಗಳಿಗೆ ಎಲ್ಲಿ ಮುಳುವಾಗಿಬಿಡುತ್ತದೋ ಎಂಬ ಭಯವೇ ಇದಕ್ಕೆ ಕಾರಣ.
ಚರಿತ್ರೆಯ ಚಿತಾಭಸ್ಮವನ್ನು ಕೆದಕಿ ರಾಮ,ರಾವಣ, ಬಾಬರ, ಟಿಪ್ಪು, ನೆಹರು, ಗಾಂಧಿ, ಜಿನ್ನಾ, ಸುಭಾಶ್, ಪಟೇಲ್, ಇಂದಿರ ಇತ್ಯಾದಿ ಎಲ್ಲರನ್ನೂ ಈ ಹೊತ್ತಿಗೆ ತಂದು ಕಿಡಿ ಹೊತ್ತಿಸಿ ಚಳಿ ಕಾಯಿಸಿಕೊಳ್ಳುವುದನ್ನು ಭಾರತದ ವಿಕೃತ ರಾಜಕೀಯ ವ್ಯವಸ್ಥೆಗೆ ಹೇಳಿಕೊಡಬೇಕಾದ ಅಗತ್ಯತೆ ಇಲ್ಲ.
ಉದಾಹರಣೆಗೆ ಎಂದೋ ತನ್ನ ರಾಜ್ಯವನ್ನು ಉಳಿಸಿಕೊಳ್ಳಲು ತನ್ನಿಬ್ಬರ ಮಕ್ಕಳನ್ನು ಒತ್ತೆ ಇಟ್ಟು ಕೊನೆಯ ಉಸಿರಿನವರೆಗೂ ಹೋರಾಡಿದ ಟಿಪ್ಪುವನ್ನು ಚರಿತ್ರೆಯ ಒಂದು ಭಾಗವಾಗಿ ನೋಡದೇ ಈ ಹೊತ್ತಿಗೆ ಜಯಂತಿಯ ಹೆಸರಿನಲ್ಲಿ ಎಳೆತಂದು ಮುಸ್ಲಿಂರ ವೋಟಿಗಾಗಿ ಕಾಂಗ್ರೆಸ್ ಓಲೈಸುತ್ತಿದ್ದರೆ, ಹಿಂದೂಗಳ ವೋಟಿಗಾಗಿ ಬಿಜೆಪಿ ವಿರೋಧಿಸುತ್ತಿದೆ.
ಈ ಪಕ್ಷಗಳಿಂದ ಜನಸಾಮಾನ್ಯನ ಬದುಕು ಹಸನಾಗಿಲ್ಲ. ಜನಸಾಮಾನ್ಯರ ಬದುಕನ್ನು ಹಸನಾಗಿಸಬಲ್ಲ ಕೆಲಸಗಳನ್ನು ಬಿಟ್ಟು ಉಳಿದೆಲ್ಲವುಗಳನ್ನು ಅಧಿಕಾರದಲ್ಲಿರುವ ಪಕ್ಷಗಳು ಮಾಡುತ್ತಿವೆ. ಈಗಲೂ ಹೈವೇ ಬದಿಗೆ ಕೊಳಚೆಯಲ್ಲಿ ಟೆಂಟೊಂದನ್ನು ಹಾಕಿ ಜೀವನ ಸಾಗಿಸುವ, ಟ್ರಾಪಿಕ್ಕಲ್ಲಿ ತಟ್ಟೆ ಹಿಡಿದುಕೊಂಡು ಭಿಕ್ಷೆ ಬೇಡುವ, ಮ್ಯಾನ್ ಹೋಲ್ಗೇ ಇಳಿದು ಸ್ವಚ್ಛಗೊಳಿಸುವಾಗ ಸಾಯುವ, ಸಾಲ ಮಾಡಿ ಬೆಳೆ ಬರದೇ, ಬಂದೂ ಸರಿಯಾದ ಬೆಲೆ ಬರದೇ ಸಾಯುವ, ಚಪ್ಪಾಳೆ ತಟ್ಟಿ ಕಾಸು ಬೇಡುವ, ಉದ್ಯೋಗಕ್ಕಾಗಿ ಅಲೆದಾಡಿ ಚಪ್ಪಲಿ ಸವೆಸಿಕೊಳ್ಳುವ, ಮೂರೊತ್ತಿನ ಊಟಕ್ಕೆ ಗತಿಯಿಲ್ಲದೇ ಮೈ ಮಾರಿಕೊಂಡು ಜೀವನ ಸಾಗಿಸುವ ಹೀಗೆ ಏನೇನೋ ಕಷ್ಟಗಳ ಸುಳಿಯಲ್ಲಿ ಸಿಲುಕಿಕೊಂಡಿರುವ ದೊಡ್ಡ ಸಂಖ್ಯೆಯ ಜನ ಭಾರತದಲ್ಲಿ ಈಗಲೂ ಇದೆ.
ಭಾರತದ ರಾಜಕೀಯ ವ್ಯವಸ್ಥೆಗೆ ಎಂದಿಗೂ ಆರೋಗ್ಯ, ಶಿಕ್ಷಣ,ಜಲ,ಪರಿಸರ, ವಿಜ್ಞಾನ-ತಂತ್ರಜ್ಞಾನ, ಕೃಷಿ, ಮೂಲಭೂತ ಸೌಕರ್ಯ, ಉದ್ಯೋಗ, ಪ್ರವಾಸೋದ್ಯಮ, ಕಸ - ಮಾಲಿನ್ಯ ನಿರ್ವಹಣೆ ಇತ್ಯಾದಿ ಇವೆಲ್ಲ ಪ್ರಚಾರದ ಪ್ರಣಾಳಿಕೆಯ ಮುಖ್ಯ ವಿಷಯಗಳೇ ಅಲ್ಲ. ಇಲ್ಲೇನಿದ್ದರೂ ರಾಮ, ರಾವಣ, ಬಾಬರ, ಟಿಪ್ಪು, ಗಾಂಧಿ, ಜಿನ್ನಾ, ನೆಹರು, ಪಟೇಲ್, ಹಿಂದುತ್ವ, ಮಂದಿರ, ತಲಾಖ್, ಗೋರಕ್ಷಾ, ಗೋಮೂತ್ರ, ಸೆಗಣಿ, ಪಕೋಡಾ, ಮೋರಿ ಗ್ಯಾಸ್, 60 ವರ್ಷ, ಇಸ್ವಗುರು, ಮಂಕೀ ಬಾತ್, ಶಬರಿಮಲೆ, ಸಂವಿಧಾನ, ಪ್ಲೈಟ್ ಮೋಡ್, ಪಪ್ಪು, ಇಟಲಿ ರಾಣಿ, 18 ತಾಸು ಕೆಲಸ... ಇನ್ನೂ ಏನೇನೋ ಭಾರತ್ ಮಾತಾಕೀ ಜೈ, ವಂದೇ ಮಾತರಂ!
ಇವ್ಯಾವ ರಾಜಕೀಯ ವಿಕೃತಿಗಳು ಜನಸಾಮಾನ್ಯನ ಬದುಕನ್ನು ಹಸನಾಗಿಸುವುದಿಲ್ಲ. ಅವನ ಬೆಂಬಲಕ್ಕೆ ಬರೋದು ಅವನು ನಂಬಿರುವ ಕಾಯಕ ಮಾತ್ರ. ನೂರಕ್ಕೆ ತೊಂಬತ್ತೊಂಬತ್ತರಷ್ಟು ಜನ ಮೋದಿಗೆ ಜೈ ಎನ್ನುತ್ತಾರೆಂಬ ಕಾರಣಕ್ಕೆ ಕುರಿಗಳು ಗುಂಪಿನಲ್ಲಿ ಬ್ಯಾ ಎನ್ನುವ ಹಾಗೆ ಗುಂಪಿನಲ್ಲಿ ಜೈ ಎನ್ನುವುದು, ಗಾಂಧಿ ಎಂಬ ಹೆಸರಿದೆ ಎಂಬ ಕಾರಣಕ್ಕೆ ರಾಹುಲ್ನನ್ನು ಬೆಂಬಲಿಸುವುದು,ಯಾವನೋ ಒಬ್ಬ ರಾಜಕೀಯ ತಿರುಬೋಕಿ ಜೆಡ್ ಸೆಕ್ಯುರಿಟಿಯಲ್ಲಿ ನಿಂತು ಮಾಡಿದ ಪ್ರಚೋದನಕಾರಿ ಭಾಷಣವನ್ನು ಗಂಭೀರವಾಗಿ ಪರಿಗಣಿಸಿ ಬಲಿಪಶುವಾಗುವುದು, ರಾಜಕೀಯ ಪಕ್ಷಗಳ ಬೂಟು ನೆಕ್ಕೋ ಸಂಘ ಸಂಸ್ಥೆಗಳಲ್ಲಿ ಸೇರಿ ಕ್ಷಣಿಕ ಜೀವನದ ಅಮೂಲ್ಯ ಕ್ಷಣಗಳನ್ನೂ ಕಳೆದುಕೊಳ್ಳುವುದು ನಮ್ಮ ಭವಿಷ್ಯದ ಗೋರಿಯನ್ನು ನಾವೇ ತೋಡಿಕೊಂಡ ಹಾಗೆ!
ಟಿಪ್ಪು ತನಗೆಂದೂ ಒಂದು ಜಯಂತಿ ಬೇಕೆಂದು, ರಾಮ ತನಗೆಂದೂ ಒಂದು ಮಂದಿರ ಬೇಕೆಂದು, ಸರ್ದಾರ್ ಪಟೇಲ್ ತಮಗೆಂದೂ ಒಂದು ಮೂರು ಸಾವಿರ ಕೋಟಿ ರೂಪಾಯಿಯ ಎತ್ತರದ ಪ್ರತಿಮೆ ಬೇಕೆಂದು, ಬಸವಣ್ಣ ತನಗೆಂದೂ ಲಂಡನ್ನಲ್ಲೊಂದು ಪ್ರತಿಮೆ ಬೇಕೆಂದು ಕೇಳಿಲ್ಲ ಕೇಳುವಷ್ಟು ಸಂಕುಚಿತರು ಅವರಲ್ಲ. ನಿಜವಾದ ಸಂಕುಚಿತರು ಮತ್ತು ನೀಚರೆಂದರೇ ಅವರ ಹೆಸರಿನ ಮೇಲೆ ರಾಜಕೀಯ ಮಾಡುವವರು.
ಬಹಳ ವಿಷಾಧದ ಸಂಗತಿಯೇನೆಂದರೆ ಹಿಮ್ಮುಖವಾಗಿ ಅಥವಾ ಅನಾಗರೀಕತೆಯೆಡೆಗೆ ತಲುಪಲು ಹವಣಿಸುತ್ತಿರುವ ಜಗತ್ತು ಕೂಡ ಇದೆ. ಈ ಹವಣಿಕೆಗೆ ವೇಗವರ್ಧಕವಾಗಿ ವಿಕೃತ, ವಿಕ್ಷಿಪ್ತ ರಾಜಕೀಯ ವ್ಯವಸ್ಥೆಯೂ ಇರುತ್ತದೆ. ಈ ವಿಕ್ಷಿಪ್ತ ಮತ್ತು ವಿಕೃತ ರಾಜಕೀಯ ವ್ಯವಸ್ಥೆ ಸಮಾಜವನ್ನು ತಾನಿರುವ ಮಟ್ಟದಿಂದ ಒಂದು ಹೆಜ್ಜೆ ಮುಂದೆ ಹೋಗಿ ಯೋಚಿಸುವುದನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ. ಬದಲಾಗಿ ಮತ್ತೆ ಹಿಮ್ಮುಖವಾಗಿ ತಳ್ಳುತ್ತದೆ. ಸಮಾಜದ ಮುಮ್ಮುಖ ಚಲನೆ ತನ್ನ ಹಿಡೆನ್ ಅಜೆಂಡಾಗಳಿಗೆ ಎಲ್ಲಿ ಮುಳುವಾಗಿಬಿಡುತ್ತದೋ ಎಂಬ ಭಯವೇ ಇದಕ್ಕೆ ಕಾರಣ.
ಚರಿತ್ರೆಯ ಚಿತಾಭಸ್ಮವನ್ನು ಕೆದಕಿ ರಾಮ,ರಾವಣ, ಬಾಬರ, ಟಿಪ್ಪು, ನೆಹರು, ಗಾಂಧಿ, ಜಿನ್ನಾ, ಸುಭಾಶ್, ಪಟೇಲ್, ಇಂದಿರ ಇತ್ಯಾದಿ ಎಲ್ಲರನ್ನೂ ಈ ಹೊತ್ತಿಗೆ ತಂದು ಕಿಡಿ ಹೊತ್ತಿಸಿ ಚಳಿ ಕಾಯಿಸಿಕೊಳ್ಳುವುದನ್ನು ಭಾರತದ ವಿಕೃತ ರಾಜಕೀಯ ವ್ಯವಸ್ಥೆಗೆ ಹೇಳಿಕೊಡಬೇಕಾದ ಅಗತ್ಯತೆ ಇಲ್ಲ.
ಉದಾಹರಣೆಗೆ ಎಂದೋ ತನ್ನ ರಾಜ್ಯವನ್ನು ಉಳಿಸಿಕೊಳ್ಳಲು ತನ್ನಿಬ್ಬರ ಮಕ್ಕಳನ್ನು ಒತ್ತೆ ಇಟ್ಟು ಕೊನೆಯ ಉಸಿರಿನವರೆಗೂ ಹೋರಾಡಿದ ಟಿಪ್ಪುವನ್ನು ಚರಿತ್ರೆಯ ಒಂದು ಭಾಗವಾಗಿ ನೋಡದೇ ಈ ಹೊತ್ತಿಗೆ ಜಯಂತಿಯ ಹೆಸರಿನಲ್ಲಿ ಎಳೆತಂದು ಮುಸ್ಲಿಂರ ವೋಟಿಗಾಗಿ ಕಾಂಗ್ರೆಸ್ ಓಲೈಸುತ್ತಿದ್ದರೆ, ಹಿಂದೂಗಳ ವೋಟಿಗಾಗಿ ಬಿಜೆಪಿ ವಿರೋಧಿಸುತ್ತಿದೆ.
ಈ ಪಕ್ಷಗಳಿಂದ ಜನಸಾಮಾನ್ಯನ ಬದುಕು ಹಸನಾಗಿಲ್ಲ. ಜನಸಾಮಾನ್ಯರ ಬದುಕನ್ನು ಹಸನಾಗಿಸಬಲ್ಲ ಕೆಲಸಗಳನ್ನು ಬಿಟ್ಟು ಉಳಿದೆಲ್ಲವುಗಳನ್ನು ಅಧಿಕಾರದಲ್ಲಿರುವ ಪಕ್ಷಗಳು ಮಾಡುತ್ತಿವೆ. ಈಗಲೂ ಹೈವೇ ಬದಿಗೆ ಕೊಳಚೆಯಲ್ಲಿ ಟೆಂಟೊಂದನ್ನು ಹಾಕಿ ಜೀವನ ಸಾಗಿಸುವ, ಟ್ರಾಪಿಕ್ಕಲ್ಲಿ ತಟ್ಟೆ ಹಿಡಿದುಕೊಂಡು ಭಿಕ್ಷೆ ಬೇಡುವ, ಮ್ಯಾನ್ ಹೋಲ್ಗೇ ಇಳಿದು ಸ್ವಚ್ಛಗೊಳಿಸುವಾಗ ಸಾಯುವ, ಸಾಲ ಮಾಡಿ ಬೆಳೆ ಬರದೇ, ಬಂದೂ ಸರಿಯಾದ ಬೆಲೆ ಬರದೇ ಸಾಯುವ, ಚಪ್ಪಾಳೆ ತಟ್ಟಿ ಕಾಸು ಬೇಡುವ, ಉದ್ಯೋಗಕ್ಕಾಗಿ ಅಲೆದಾಡಿ ಚಪ್ಪಲಿ ಸವೆಸಿಕೊಳ್ಳುವ, ಮೂರೊತ್ತಿನ ಊಟಕ್ಕೆ ಗತಿಯಿಲ್ಲದೇ ಮೈ ಮಾರಿಕೊಂಡು ಜೀವನ ಸಾಗಿಸುವ ಹೀಗೆ ಏನೇನೋ ಕಷ್ಟಗಳ ಸುಳಿಯಲ್ಲಿ ಸಿಲುಕಿಕೊಂಡಿರುವ ದೊಡ್ಡ ಸಂಖ್ಯೆಯ ಜನ ಭಾರತದಲ್ಲಿ ಈಗಲೂ ಇದೆ.
ಭಾರತದ ರಾಜಕೀಯ ವ್ಯವಸ್ಥೆಗೆ ಎಂದಿಗೂ ಆರೋಗ್ಯ, ಶಿಕ್ಷಣ,ಜಲ,ಪರಿಸರ, ವಿಜ್ಞಾನ-ತಂತ್ರಜ್ಞಾನ, ಕೃಷಿ, ಮೂಲಭೂತ ಸೌಕರ್ಯ, ಉದ್ಯೋಗ, ಪ್ರವಾಸೋದ್ಯಮ, ಕಸ - ಮಾಲಿನ್ಯ ನಿರ್ವಹಣೆ ಇತ್ಯಾದಿ ಇವೆಲ್ಲ ಪ್ರಚಾರದ ಪ್ರಣಾಳಿಕೆಯ ಮುಖ್ಯ ವಿಷಯಗಳೇ ಅಲ್ಲ. ಇಲ್ಲೇನಿದ್ದರೂ ರಾಮ, ರಾವಣ, ಬಾಬರ, ಟಿಪ್ಪು, ಗಾಂಧಿ, ಜಿನ್ನಾ, ನೆಹರು, ಪಟೇಲ್, ಹಿಂದುತ್ವ, ಮಂದಿರ, ತಲಾಖ್, ಗೋರಕ್ಷಾ, ಗೋಮೂತ್ರ, ಸೆಗಣಿ, ಪಕೋಡಾ, ಮೋರಿ ಗ್ಯಾಸ್, 60 ವರ್ಷ, ಇಸ್ವಗುರು, ಮಂಕೀ ಬಾತ್, ಶಬರಿಮಲೆ, ಸಂವಿಧಾನ, ಪ್ಲೈಟ್ ಮೋಡ್, ಪಪ್ಪು, ಇಟಲಿ ರಾಣಿ, 18 ತಾಸು ಕೆಲಸ... ಇನ್ನೂ ಏನೇನೋ ಭಾರತ್ ಮಾತಾಕೀ ಜೈ, ವಂದೇ ಮಾತರಂ!
ಇವ್ಯಾವ ರಾಜಕೀಯ ವಿಕೃತಿಗಳು ಜನಸಾಮಾನ್ಯನ ಬದುಕನ್ನು ಹಸನಾಗಿಸುವುದಿಲ್ಲ. ಅವನ ಬೆಂಬಲಕ್ಕೆ ಬರೋದು ಅವನು ನಂಬಿರುವ ಕಾಯಕ ಮಾತ್ರ. ನೂರಕ್ಕೆ ತೊಂಬತ್ತೊಂಬತ್ತರಷ್ಟು ಜನ ಮೋದಿಗೆ ಜೈ ಎನ್ನುತ್ತಾರೆಂಬ ಕಾರಣಕ್ಕೆ ಕುರಿಗಳು ಗುಂಪಿನಲ್ಲಿ ಬ್ಯಾ ಎನ್ನುವ ಹಾಗೆ ಗುಂಪಿನಲ್ಲಿ ಜೈ ಎನ್ನುವುದು, ಗಾಂಧಿ ಎಂಬ ಹೆಸರಿದೆ ಎಂಬ ಕಾರಣಕ್ಕೆ ರಾಹುಲ್ನನ್ನು ಬೆಂಬಲಿಸುವುದು,ಯಾವನೋ ಒಬ್ಬ ರಾಜಕೀಯ ತಿರುಬೋಕಿ ಜೆಡ್ ಸೆಕ್ಯುರಿಟಿಯಲ್ಲಿ ನಿಂತು ಮಾಡಿದ ಪ್ರಚೋದನಕಾರಿ ಭಾಷಣವನ್ನು ಗಂಭೀರವಾಗಿ ಪರಿಗಣಿಸಿ ಬಲಿಪಶುವಾಗುವುದು, ರಾಜಕೀಯ ಪಕ್ಷಗಳ ಬೂಟು ನೆಕ್ಕೋ ಸಂಘ ಸಂಸ್ಥೆಗಳಲ್ಲಿ ಸೇರಿ ಕ್ಷಣಿಕ ಜೀವನದ ಅಮೂಲ್ಯ ಕ್ಷಣಗಳನ್ನೂ ಕಳೆದುಕೊಳ್ಳುವುದು ನಮ್ಮ ಭವಿಷ್ಯದ ಗೋರಿಯನ್ನು ನಾವೇ ತೋಡಿಕೊಂಡ ಹಾಗೆ!
ಟಿಪ್ಪು ತನಗೆಂದೂ ಒಂದು ಜಯಂತಿ ಬೇಕೆಂದು, ರಾಮ ತನಗೆಂದೂ ಒಂದು ಮಂದಿರ ಬೇಕೆಂದು, ಸರ್ದಾರ್ ಪಟೇಲ್ ತಮಗೆಂದೂ ಒಂದು ಮೂರು ಸಾವಿರ ಕೋಟಿ ರೂಪಾಯಿಯ ಎತ್ತರದ ಪ್ರತಿಮೆ ಬೇಕೆಂದು, ಬಸವಣ್ಣ ತನಗೆಂದೂ ಲಂಡನ್ನಲ್ಲೊಂದು ಪ್ರತಿಮೆ ಬೇಕೆಂದು ಕೇಳಿಲ್ಲ ಕೇಳುವಷ್ಟು ಸಂಕುಚಿತರು ಅವರಲ್ಲ. ನಿಜವಾದ ಸಂಕುಚಿತರು ಮತ್ತು ನೀಚರೆಂದರೇ ಅವರ ಹೆಸರಿನ ಮೇಲೆ ರಾಜಕೀಯ ಮಾಡುವವರು.
Comments
Post a Comment