Skip to main content

Posts

ಮಹದಾಯಿ ಮಡಿಲಲ್ಲಿ..!

 
Recent posts

ಚತುರ್ದ್ವಂಸಕ ನಾಶ ಅಭಿಯಾನ-ಚೀನಾದ ಸ್ವಯಂಕೃತ ವಿಪತ್ತು!

ಈ ಅಭಿಯಾನ ಚೀನಾದ "ಮುನ್ನಡೆಯ ಮಹಾಜಿಗಿತ" (Great Leap Forward 1958-1962 ) ನೀತಿಯ ಮೊಟ್ಟ ಮೊದಲ ಕ್ರಮವಾಗಿತ್ತು. ಇದರಡಿಯಲ್ಲಿ ಗುರುತಿಸಿದ ಆ ನಾಲ್ಕು ದ್ವಂಸಕಗಳೆಂದರೆ- ಇಲಿ, ನೊಣ, ಸೊಳ್ಳೆ ಮತ್ತು ಗುಬ್ಬಚ್ಚಿ. ಗುಬ್ಬಚ್ಚಿಗಳನ್ನು ನಾಶಪಡಿಸುವ ಅಭಿಯಾನ"ಗುಬ್ಬಚ್ಚಿಗಳ ಹತ್ಯೆಯ ಅಭಿಯಾನ" ಎಂದೇ ಪ್ರಸಿದ್ಧಿಯಾಗಿತ್ತು. ಇದು ತೀವ್ರ ತೆರನಾದ ಪರಿಸರ ಅಸಮತೋಲನಕ್ಕೆ ಕಾರಣವಾಯಿತು. ಚೀನಾದ ಭೀಕರ ಕ್ಷಾಮಕ್ಕೆ ಕಾರಣವಾಯಿತು. ಇದನ್ನರಿತ ಮಾವೋ ತ್ಸೆ ತುಂಗ್ 1960 ರಲ್ಲಿ ಈ ಅಭಿಯಾನದ ಪಟ್ಟಿಯಿಂದ ಗುಬ್ಬಿಯನ್ನು ಕೈಬಿಟ್ಟು ತಿಗಣೆಯನ್ನು ಸೇರಿಸಿದ. "ಚತುರ್ದ್ವಂಸಕ ನಾಶ ಅಭಿಯಾನ"ವನ್ನು ಮಾವೋ ತ್ಸೆ ತುಂಗ್ 1960 ರಲ್ಲಿ  ಮುನ್ನಡೆಯ ಮಹಾಜಿಗಿತ ಎಂಬ ಆರ್ಥಿಕ ನೀತಿಯ ಭಾಗವಾಗಿ ಪರಿಚಯಿಸಿದ.ಇದರ ಮೂಲ ಉದ್ದೇಶ  ರೋಗ ರುಜಿನಗಳನ್ನು ಹರಡುವ ದ್ವಂಸಕಗಳಾದ ಈ ಕೆಳಗಿನ ಜೀವಿಗಳ ನಿರ್ಮೂಲನೆಯಾಗಿತ್ತು. 1. ಸೊಳ್ಳೆ -ಮಲೇರಿಯಾ ವಾಹಕ 2. ಇಲಿ-ಪ್ಲೇಗ್ ವಾಹಕ 3. ವ್ಯಾಪಕ ನೊಣಗಳು 4. ಗುಬ್ಬಚ್ಚಿಗಳು- ಆಹಾರಧಾನ್ಯ ಮತ್ತು ಹಣ್ಣುಗಳ ದ್ವಂಸಕ. ಗುಬ್ಬಚ್ಚಿಗಳು,ರೈತರನ್ನು ಶೋಷಿಸುವ ಬಂಡವಾಳಶಾಹಿತ್ವದ ಜೀವಿಗಳೆಂದು ಚೀನಾ ಸರ್ಕಾರ ಘೋಷಿಸಿತು. ಈ ಅಭಿಯಾನದ ಪರಿಣಾಮವಾಗಿ ಲಕ್ಷಾಂತರ ಗುಬ್ಬಚ್ಚಿಗಳು ಸತ್ತವು. ಅವುಗಳಿಗೆ ಮರದ ಮೇಲೆ ಅಷ್ಟೆ ಅಲ್ಲ ಆಕಾಶದಲ್ಲಿ ಹಾರಾಡಲು ಅವಕಾಶವಿರಲಿಲ್ಲ. ಗುಬ್ಬಚ್ಚಿ ಗೂಡುಗಳನ್ನು,

ನಗುವುದೋ, ಅಳುವುದೋ ನೀವೇ ಹೇಳಿ!

 ಇಡೀ ಜಗತ್ತೇ ವಿಜ್ಞಾನ, ತಂತ್ರಜ್ಞಾನ, ವೈಚಾರಿಕತೆ, ವೈಜ್ಞಾನಿಕತೆಯೆಡೆಗೆ ಬಹಳ ತೀವ್ರಗತಿಯಲ್ಲಿ ತೆರೆದುಕೊಳ್ಳುತ್ತಿದೆ. ಪ್ರತಿ ಮಿಲಿ ಸೆಕೆಂಡುಗಳಿಗೂ ತಳಮಟ್ಟದ ಮಾನವ ಜೀವನವನ್ನು ಸುಗಮಗೊಳಿಸಬಲ್ಲ ಸಂಶೋಧನೆಗಳಾಗುತ್ತಿವೆ. ಬದಲಾವಣೆ ಜಗದ ನಿಯಮ, ಜೀವಂತಿಕೆಯ ಲಕ್ಷಣ. ಬದಲಾವಣೆಗೆ ಸ್ಪಂದಿಸದಿರುವಿಕೆ ಜೀವಂತಿಕೆಯ ಲಕ್ಷಣವೇ ಅಲ್ಲ. ಬದಲಾಗದ ಸಮಾಜ ಅವನತಿಯತ್ತ ಸಾಗುತ್ತಿರುವ ಅಥವಾ ಕಾಲಚಕ್ರದಲ್ಲಿ ಹಿಮ್ಮುಖವಾಗಿ ಚಲಿಸುತ್ತಿರುವ ಸಂಕೇತ. ಮಾನವ ಜೀವಿಯ ಪ್ರತಿ ತಲೆಮಾರು ಸಾಧ್ಯವಾದಷ್ಟು ನಾಗರಿಕತೆ ಅಥವಾ ಮಾನವೀಯತೆಯನ್ನು ಗಳಿಸುತ್ತ ಈಗಿರುವ ಮಟ್ಟಕ್ಕೆ ಬಂದು ತಲುಪಿದೆ.ಅಂದರೆ ಮುಮ್ಮುಖ ಚಲನೆ ಎಂಬುದು ಸಾಧ್ಯವಾದಷ್ಟು ಜೀವಪರ. ಬಹಳ ವಿಷಾಧದ ಸಂಗತಿಯೇನೆಂದರೆ ಹಿಮ್ಮುಖವಾಗಿ ಅಥವಾ ಅನಾಗರೀಕತೆಯೆಡೆಗೆ ತಲುಪಲು ಹವಣಿಸುತ್ತಿರುವ ಜಗತ್ತು ಕೂಡ ಇದೆ. ಈ ಹವಣಿಕೆಗೆ ವೇಗವರ್ಧಕವಾಗಿ ವಿಕೃತ, ವಿಕ್ಷಿಪ್ತ ರಾಜಕೀಯ ವ್ಯವಸ್ಥೆಯೂ ಇರುತ್ತದೆ. ಈ ವಿಕ್ಷಿಪ್ತ ಮತ್ತು ವಿಕೃತ ರಾಜಕೀಯ ವ್ಯವಸ್ಥೆ ಸಮಾಜವನ್ನು ತಾನಿರುವ ಮಟ್ಟದಿಂದ ಒಂದು ಹೆಜ್ಜೆ ಮುಂದೆ ಹೋಗಿ ಯೋಚಿಸುವುದನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ. ಬದಲಾಗಿ ಮತ್ತೆ ಹಿಮ್ಮುಖವಾಗಿ ತಳ್ಳುತ್ತದೆ. ಸಮಾಜದ ಮುಮ್ಮುಖ ಚಲನೆ ತನ್ನ ಹಿಡೆನ್ ಅಜೆಂಡಾಗಳಿಗೆ ಎಲ್ಲಿ ಮುಳುವಾಗಿಬಿಡುತ್ತದೋ ಎಂಬ ಭಯವೇ ಇದಕ್ಕೆ ಕಾರಣ. ಚರಿತ್ರೆಯ ಚಿತಾಭಸ್ಮವನ್ನು ಕೆದಕಿ ರಾಮ,ರಾವಣ, ಬಾಬರ, ಟಿಪ್ಪು,  ನೆಹರು, ಗಾಂಧಿ, ಜಿನ್ನಾ

ಈಸಬೇಕು, ಇದ್ದು ಜೈಸಬೇಕು!!

ನನಗೆ ಕೆಲವೊಬ್ಬರು ಹೇಳ್ತಿರ್ತಾರೆ "ಅವನು ಪರೀಕ್ಷೆಯಲ್ಲಿ ಫೇಲಾದ", ನನ್ನ ಪ್ರಶ್ನೆ "ಪ್ರತಿಸಲ ಪಾಸಾಗಬೇಕಂತ ಏನಾದ್ರೂ ರೂಲ್ ಇದೆಯಾ?" ಕೆಲವರು ಹೇಳ್ತಾರೆ" ನನ್ನ ಹುಡುಗ/ಹುಡುಗಿ ಬಿಟ್ಟೋದನು/ಳು", ಆಗ ನನ್ನ ಪ್ರಶ್ನೆ" ಅಲ್ಲ ಸ್ವಾಮಿ ಎಲ್ಲ ಕಡೆ ಯಶಸ್ವಿ ಸಂಬಂಧಗಳೇ ಇರಬೇಕಂತ ರೂಲ್ ಏನಾದ್ರೂ ಇದೆಯಾ?" ಕೆಲವರು ಕೇಳ್ತಾರೆ "ಯಾಕೆ ಖಿನ್ನನಾಗಿದಿಯಾ?" ನನ್ನ ಪ್ರಶ್ನೆ "ಯಾವಾಗ್ಲೂ ನಗ್ತಾನೇ ಇರಬೇಕಂತ ರೂಲ್ ಇದೆಯಾ?" ಕೆಲವರು ಅಳ್ತಾರೆ "ನನ್ನ ತೀರ್ಮಾನ ಸರಿಯಾಗಿರಲಿಲ್ಲ?" ಆಗ "ಎಲ್ಲ ತೀರ್ಮಾನಗಳನ್ನು ಸರಿಯಾಗಿಯೇ ತೆಗೆದುಕೊಳ್ಳಲಿಕ್ಕೆ ಸಾಧ್ಯಾನಾ?" ಏನಂತ ಅಂದರೆ ನಮ್ಮ ಜೀವನ ಯಾವಾಗಲೂ ಪರಿಪೂರ್ಣ/ಶಾಶ್ವತವಾಗಿ ಇರಬೇಕೆಂಬ ನಿರೀಕ್ಷೆ ನಮ್ಮ ಅಸಂತೋಷಕ್ಕೆ ಬಹುದೊಡ್ಡ ಕಾರಣ, ಈ ಸೃಷ್ಟಿಯಲ್ಲಿ ಯಾವುದೂ ಶಾಶ್ವತವಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಪ್ರತಿ ಕಗ್ಗತ್ತಲ ಇರುಳಿನ ನಂತರವೂ ಪ್ರಕಾಶಮಾನವಾದ ಹಗಲಿದೆ, ಪ್ರತಿ ಸಾವಿಗೂ ಬದಲಾಗಿ ಹೊಸ ಹುಟ್ಟಿದೆ, ಪೂರ್ಣಚಂದ್ರನ ಉದಯದ ಮೊದಲು ಶೂನ್ಯದಿಂದ ಆರಂಭವಾಗುವ  ಹಂತಗಳಿವೆ, ಸೃಷ್ಟಿಯ ಅಪರಿಪೂರ್ಣತೆಯಲ್ಲೂ ನಮಗರ್ಥವಾಗದ ಪರಿಪೂರ್ಣತೆ ಅಡಗಿದೆ, ಆದ್ದರಿಂದ ನಾವು ನಮ್ಮ ಬದುಕಿನ ಕೆಟ್ಟ /ಅಪರಿಪೂರ್ಣ ಅಂಶಗಳನ್ನೇ ತೀರಾ ಹಚ್ಚಿಕೊಳ್ಳಬಾರದು. ದೇವರಿಗೂ ಕೂಡ ನಿಮಗೆ ಕೆಟ್ಟದ್ದು ಮಾಡಬೇಕೆಂಬ ಮನ

💚ಕನ್ನಡತಿ ಮತ್ತು ಕರುನಾಡ ಯೋಧ💜

ರಣರಂಗದೀ ಕಾದಾಡಿ ಜಲದಾಹದೀಂ ಬಂದನ್ ಕರುನಾಡ ಯೋಧ ಶ್ವೇತಾಶ್ವವಂ ಪೇರಿ! ಮೊದಲೇ ಬಿಸಿಲುಗಾಲ ಸುಡುವ ಸೂರ್ಯ ನಾಡಿಗಾಗಿ ಹೋರಾಡಿ ಬಳಲಿ ಬೆಂಡಾದ ಯೋಧ ಬಯಲುಸೀಮೆಯಲ್ ನೀರ ಅದಾವ ಮೂಲಗಳಿಲ್ಲ ಬತ್ತಿ ಬಿರುಕು ಬಿಟ್ಟಿವೆಯಲ್ಲ ಬಿಸಿಲ ಹೊಡೆತಕ್ಕೆ ಇಂತಿರುವಾಗ ದೂರದಲ್ಲಿ ದೊಡ್ಡದಾದೊಂದು ಬೇವಿನ ಗಿಡದಡಿಗೆ ಸುಂದರವಾದೊಂದು ಗುಡಿಸಲು ತವಕಿಸುತ ಸಾಗಿದ ಯೋಧ ಗುಡಿಸಲ ಬಳಿಗೆ ಕೂಗಿದ "ನೀರು ಕೊಡುವಿರ ತುಸು ಇಲ್ಲದಿರೇ ಸಾಯುವೆ" ಕೂಗು ಕೇಳಿದ ತರುಣಿಯೋರ್ವಳ್ ಹೊರಬಂದು ನೋಡಿದರೆ ತ್ರಾಣವಿಲ್ಲದೇ ಕುಸಿದು ಬಿದ್ದಿರುವ ಯೋಧ ವಿಳಂಬಿಸದೇ ಆ ಕನ್ನಡತಿ ತಂದಳ್ ತಂಪಾದ ಮಜ್ಜಿಗೆಯ ಕೊಟ್ಟಳ್ ಅವನಿಗೆ ವಾತ್ಸಲ್ಯವ ಬೆರೆಸಿ, ಕುಡಿದ ಯೋಧ ಯೋಧನ ಶ್ವೇತಾಶ್ವಕ್ಕೂ ಕರುಣಿಸಿದಳು ನೀರು-ಆಹಾರ ಯೋಧನಲ್ಲೀಗ ಶಕ್ತಿಯ ಸಂಚಲನ ತರುಣಿಗೆ ರೋಮಾಂಚನ ಕ್ಷಣ ಹೊತ್ತಿನವರೆಗೆ ಮಾತು-ಮಂಥನ ರಣರಂಗದ ಚಿತ್ರಣ ತರುಣಿಯಿಂದ ಪ್ರೇಮ ನಿವೇದನ ಕನ್ನಡತಿಯ ಅಭಿಮಾನಕ್ಕೆ ಕೈ ಮುಗಿದ ವೀರಯೋಧ ಹೇಳಿದನಂತ ಧನ್ಯವಾದ ಹೊರಡಲಣಿಯಾದ ತರುಣಿಯ ಕಣ್ಣಲ್ಲಿ ಪ್ರೇಮ ಭಾಷ್ಪ ಗುರುತಿಸಿದ ಯೋಧ ರಣರಂಗದಲೀ ಬದುಕಿದರೆ ಮತ್ತೆ ಬರುವೆನೆಂದ್ ಮುತ್ತಿಕ್ಕಿದ ಆಕೆಯ ಕೈಗೆ "ಇದು ಇಳಿಸಂಜೆ ಹೊತ್ತು ಇರಬಹುದು ತಾವಿವತ್ತು ವಿಶ್ರಮಿಸಿ ಹೋಗಬಹುದಲ್ಲ ನಾಳೆ" ಎಂದಳವಳು ಕಾಳಜಿಯಿಂದ "ಇಲ್ಲ ತರುಣಿ ಧನ್ಯವಾದ ಆಪತ್ತಿದೆ

ಸಹ್ಯಾದ್ರಿಯ ಮಡಿಲಲ್ಲಿ...!!

ಅದೋ ಅಲ್ನೋಡಿ ಅದೇ ನನ್ನೂರು! ಸಹ್ಯಾದ್ರಿಯ ಮಡಿಲಲ್ಲಿ, ಮಲಪ್ರಭೆಯ ಬದಿಯಲ್ಲಿ||ಪ|| ಆಹಾ ಜಂಬೂ ನೇರಳೆ ಹುಳಿ-ಸಿಹಿಯ ಕವಳೆ ಹುಳಿ-ಒಗರಿನ ನೆಲ್ಲಿ ಮಾವು, ಹಲಸು, ಪೇರಲ, ಅಲ್ಲಲ್ಲಿ||೧|| ಕನ್ನಡ ಕೋಗಿಲೆಯ ಕಲರವ ಹುಲಿಯ ಘರ್ಜನೆ ಆನೆಯ ಓಂಕಾರ ಮಣ್ಣ ಕಣ ಕಣದಲ್ಲೂ ನಿಸರ್ಗ ಝೇಂಕಾರ||೨|| ಮುಂಜಾನೆಯ ಇಬ್ಬನಿ ನಡು ಹಗಲಿನ ಸುಳಿಗಾಳಿ ಇಳಿಸಂಜೆಯ ಗೋಧೂಳಿ ಸುಂದರ ಕಾಡ ಹೂಗಳ ಓಕುಳಿ||೩|| ಹಿತ ಹವೆಯ ಬೇಸಿಗೆ ಧಾರಾಕಾರ ಮಳೆಗಾಲ ಥರಗುಟ್ಟಿಸುವ ಚಳಿಗಾಲ ಸಕಲ ಜೀವಾತ್ಮರಿಗೂ ಉಳಿಗಾಲ||೪|| (ಈ ಸಲದ ಕನ್ನಡ ರಾಜ್ಯೋತ್ಸವಕ್ಕೆ ಅರ್ಪಣೆ)