Skip to main content

💚ಕನ್ನಡತಿ ಮತ್ತು ಕರುನಾಡ ಯೋಧ💜

ರಣರಂಗದೀ ಕಾದಾಡಿ
ಜಲದಾಹದೀಂ
ಬಂದನ್ ಕರುನಾಡ ಯೋಧ
ಶ್ವೇತಾಶ್ವವಂ ಪೇರಿ!


ಮೊದಲೇ ಬಿಸಿಲುಗಾಲ
ಸುಡುವ ಸೂರ್ಯ
ನಾಡಿಗಾಗಿ ಹೋರಾಡಿ
ಬಳಲಿ ಬೆಂಡಾದ ಯೋಧ

ಬಯಲುಸೀಮೆಯಲ್
ನೀರ ಅದಾವ ಮೂಲಗಳಿಲ್ಲ
ಬತ್ತಿ ಬಿರುಕು ಬಿಟ್ಟಿವೆಯಲ್ಲ
ಬಿಸಿಲ ಹೊಡೆತಕ್ಕೆ

ಇಂತಿರುವಾಗ ದೂರದಲ್ಲಿ
ದೊಡ್ಡದಾದೊಂದು
ಬೇವಿನ ಗಿಡದಡಿಗೆ
ಸುಂದರವಾದೊಂದು ಗುಡಿಸಲು

ತವಕಿಸುತ ಸಾಗಿದ ಯೋಧ
ಗುಡಿಸಲ ಬಳಿಗೆ
ಕೂಗಿದ "ನೀರು ಕೊಡುವಿರ
ತುಸು ಇಲ್ಲದಿರೇ ಸಾಯುವೆ"

ಕೂಗು ಕೇಳಿದ ತರುಣಿಯೋರ್ವಳ್
ಹೊರಬಂದು ನೋಡಿದರೆ
ತ್ರಾಣವಿಲ್ಲದೇ ಕುಸಿದು
ಬಿದ್ದಿರುವ ಯೋಧ

ವಿಳಂಬಿಸದೇ ಆ ಕನ್ನಡತಿ
ತಂದಳ್ ತಂಪಾದ ಮಜ್ಜಿಗೆಯ
ಕೊಟ್ಟಳ್ ಅವನಿಗೆ ವಾತ್ಸಲ್ಯವ
ಬೆರೆಸಿ, ಕುಡಿದ ಯೋಧ

ಯೋಧನ ಶ್ವೇತಾಶ್ವಕ್ಕೂ
ಕರುಣಿಸಿದಳು ನೀರು-ಆಹಾರ
ಯೋಧನಲ್ಲೀಗ ಶಕ್ತಿಯ ಸಂಚಲನ
ತರುಣಿಗೆ ರೋಮಾಂಚನ

ಕ್ಷಣ ಹೊತ್ತಿನವರೆಗೆ
ಮಾತು-ಮಂಥನ
ರಣರಂಗದ ಚಿತ್ರಣ
ತರುಣಿಯಿಂದ ಪ್ರೇಮ ನಿವೇದನ

ಕನ್ನಡತಿಯ ಅಭಿಮಾನಕ್ಕೆ
ಕೈ ಮುಗಿದ ವೀರಯೋಧ
ಹೇಳಿದನಂತ ಧನ್ಯವಾದ
ಹೊರಡಲಣಿಯಾದ

ತರುಣಿಯ ಕಣ್ಣಲ್ಲಿ ಪ್ರೇಮ ಭಾಷ್ಪ
ಗುರುತಿಸಿದ ಯೋಧ
ರಣರಂಗದಲೀ ಬದುಕಿದರೆ
ಮತ್ತೆ ಬರುವೆನೆಂದ್ ಮುತ್ತಿಕ್ಕಿದ ಆಕೆಯ ಕೈಗೆ

"ಇದು ಇಳಿಸಂಜೆ ಹೊತ್ತು
ಇರಬಹುದು ತಾವಿವತ್ತು
ವಿಶ್ರಮಿಸಿ ಹೋಗಬಹುದಲ್ಲ ನಾಳೆ"
ಎಂದಳವಳು ಕಾಳಜಿಯಿಂದ

"ಇಲ್ಲ ತರುಣಿ ಧನ್ಯವಾದ
ಆಪತ್ತಿದೆ ಕರುನಾಡಿಗೆ
ನನ್ನ ಅಗತ್ಯತೆಯಿದೆ
ಕನ್ನಡಿಗರಿಗೆ" ಎಂದೇರಿದ ಅಶ್ವವನ್

ದುಃಖ ತಡೆಯಲಾರದೇ
ಮತ್ತೇ ತೋರಗೊಡದೇ ಹರಸಿದಳಾ ತರುಣಿ
"ಮತ್ತೇ ಬನ್ನಿ ವಿಜಯಶಾಲಿಯಾಗಿ
ಸದಾ ಕಾಯುವೇ ನಿಮಗಾಗಿ"!!

Comments

Popular posts from this blog

ಭಾರತೀಯ ಸಮಾಜಕಾರ್ಯ ಶಿಕ್ಷಣದ ಪ್ರಸ್ತುತ ಸಮಸ್ಯೆಗಳು

ಪೀಠಿಕೆ:  ಸಮಾಜಕಾರ್ಯ ಕೇವಲ ಒಂದು ವೃತ್ತಿ ಮಾತ್ರವಾಗಿರದೇ ಅದೊಂದು ಶೈಕ್ಷಣಿಕ ಜ್ಞಾನ ಶಾಖೆಯೂ ಆಗಿದೆ. ಸಮಾಜಕಾರ್ಯ ವೃತ್ತಿಯ ಯಶಸ್ಸು, ಸಮಾಜ ಕಾರ್ಯಕರ್ತನಾದವನು ತರಬೇತಿಯ ವೇಳೆ ಎಷ್ಟರ ಮಟ್ಟಿಗೆ ಅದನ್ನು ಸೈದ್ಧಾಂತಿಕವಾಗಿ, ಪ್ರಾಯೋಗಿಕವಾಗಿ ಅರ್ಥೈಸಿಕೊಂಡು, ಅಳವಡಿಸಿಕೊಳ್ಳುತ್ತಾನೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಸಮಾಜಕಾರ್ಯ ಶಿಕ್ಷಣ ಮೂಲತಃ ಪಾಶ್ಚಾತ್ಯರ ಕೊಡುಗೆಯಾದ್ದರಿಂದ ಭಾರತದ ಸಂದರ್ಭದಲ್ಲಿ ಅದರ ಅನ್ವಯಿಸುವಿಕೆ ದೇಶೀಕರಣಗೊಂಡಿಲ್ಲ. ಸಮಾಜಕಾರ್ಯ ಶಿಕ್ಷಣ ಪರಿಚಿತವಾಗಿ ಎಂಟು ದಶಕಗಳೇ ಕಳೆದಿರುವ ಈ ಹೊತ್ತಿನಲ್ಲಿ ಅದು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಆತ್ಮಾವಲೋಕನ ಅಗತ್ಯ  ಮತ್ತು ಅನಿವಾರ್ಯವಾಗಿದೆ. ಸಮಸ್ಯೆಗಳನ್ನು ಪರಿಹರಿಸುವ ವಿಧಾನಗಳಿಗೆ ದಾರಿ ತೊರಿಸುವ ಸಮಾಜಕಾರ್ಯ ಶಿಕ್ಷಣವೇ ಸಮಸ್ಯೆಗಳ ಸುಳಿಗೆ ಸಿಲುಕುತ್ತಿರುವುದು ಕಳವಳಕಾರಿ ಸಂಗತಿ. ಈ ನಿಟ್ಟಿನಲ್ಲಿ ‘ಸಮಾಜ ಕಾರ್ಯ ಶಿಕ್ಷಣದ ಪ್ರಸ್ತುತ ಸಮಸ್ಯೆಗಳ’ ಕುರಿತಾದ ಪ್ರಬಂಧ ಮಂಡನೆ, ಬೆಳಕು ಚೆಲ್ಲುವ ಒಂದು ಚಿಕ್ಕ ಪ್ರಯತ್ನವಾಗಿದೆ. ಭಾರತದಲ್ಲಿ ಸಮಾಜಕಾರ್ಯ ಶಿಕ್ಷಣದ ವಿಕಾಸ ಪ್ರೊ. ಸಂಜಯ ಭಟ್ಟ ಬಹಳ ಸ್ಪಷ್ಟವಾಗಿ ಭಾರತದಲ್ಲಿನ ಸಮಾಜಕಾರ್ಯ ಶಿಕ್ಷಣದ ವಿಕಾಸವನ್ನು ಈ ಕೆಳಗಿನ ಹಂತಗಳಲ್ಲಿ ವರ್ಗೀಕರಿಸಿದ್ದಾರೆ. 1.ಪ್ರಾರಂಭದ ಹಂತ(1936-46): ಈ ಹಂತ ಭಾರತದ ಪ್ರಪ್ರಥಮ ಸಮಾಜಕಾರ್ಯ ಶಾಲೆಯಾದ ‘ಸರ್ ದೊರಾಬ್ಜಿ ಟಾಟಾ ಗ್ರ್ಯಾಜುಯೇಟ್ ಸ್ಕೂಲ್ ಆಫ್ ಸೋಸಿಯ

ಚತುರ್ದ್ವಂಸಕ ನಾಶ ಅಭಿಯಾನ-ಚೀನಾದ ಸ್ವಯಂಕೃತ ವಿಪತ್ತು!

ಈ ಅಭಿಯಾನ ಚೀನಾದ "ಮುನ್ನಡೆಯ ಮಹಾಜಿಗಿತ" (Great Leap Forward 1958-1962 ) ನೀತಿಯ ಮೊಟ್ಟ ಮೊದಲ ಕ್ರಮವಾಗಿತ್ತು. ಇದರಡಿಯಲ್ಲಿ ಗುರುತಿಸಿದ ಆ ನಾಲ್ಕು ದ್ವಂಸಕಗಳೆಂದರೆ- ಇಲಿ, ನೊಣ, ಸೊಳ್ಳೆ ಮತ್ತು ಗುಬ್ಬಚ್ಚಿ. ಗುಬ್ಬಚ್ಚಿಗಳನ್ನು ನಾಶಪಡಿಸುವ ಅಭಿಯಾನ"ಗುಬ್ಬಚ್ಚಿಗಳ ಹತ್ಯೆಯ ಅಭಿಯಾನ" ಎಂದೇ ಪ್ರಸಿದ್ಧಿಯಾಗಿತ್ತು. ಇದು ತೀವ್ರ ತೆರನಾದ ಪರಿಸರ ಅಸಮತೋಲನಕ್ಕೆ ಕಾರಣವಾಯಿತು. ಚೀನಾದ ಭೀಕರ ಕ್ಷಾಮಕ್ಕೆ ಕಾರಣವಾಯಿತು. ಇದನ್ನರಿತ ಮಾವೋ ತ್ಸೆ ತುಂಗ್ 1960 ರಲ್ಲಿ ಈ ಅಭಿಯಾನದ ಪಟ್ಟಿಯಿಂದ ಗುಬ್ಬಿಯನ್ನು ಕೈಬಿಟ್ಟು ತಿಗಣೆಯನ್ನು ಸೇರಿಸಿದ. "ಚತುರ್ದ್ವಂಸಕ ನಾಶ ಅಭಿಯಾನ"ವನ್ನು ಮಾವೋ ತ್ಸೆ ತುಂಗ್ 1960 ರಲ್ಲಿ  ಮುನ್ನಡೆಯ ಮಹಾಜಿಗಿತ ಎಂಬ ಆರ್ಥಿಕ ನೀತಿಯ ಭಾಗವಾಗಿ ಪರಿಚಯಿಸಿದ.ಇದರ ಮೂಲ ಉದ್ದೇಶ  ರೋಗ ರುಜಿನಗಳನ್ನು ಹರಡುವ ದ್ವಂಸಕಗಳಾದ ಈ ಕೆಳಗಿನ ಜೀವಿಗಳ ನಿರ್ಮೂಲನೆಯಾಗಿತ್ತು. 1. ಸೊಳ್ಳೆ -ಮಲೇರಿಯಾ ವಾಹಕ 2. ಇಲಿ-ಪ್ಲೇಗ್ ವಾಹಕ 3. ವ್ಯಾಪಕ ನೊಣಗಳು 4. ಗುಬ್ಬಚ್ಚಿಗಳು- ಆಹಾರಧಾನ್ಯ ಮತ್ತು ಹಣ್ಣುಗಳ ದ್ವಂಸಕ. ಗುಬ್ಬಚ್ಚಿಗಳು,ರೈತರನ್ನು ಶೋಷಿಸುವ ಬಂಡವಾಳಶಾಹಿತ್ವದ ಜೀವಿಗಳೆಂದು ಚೀನಾ ಸರ್ಕಾರ ಘೋಷಿಸಿತು. ಈ ಅಭಿಯಾನದ ಪರಿಣಾಮವಾಗಿ ಲಕ್ಷಾಂತರ ಗುಬ್ಬಚ್ಚಿಗಳು ಸತ್ತವು. ಅವುಗಳಿಗೆ ಮರದ ಮೇಲೆ ಅಷ್ಟೆ ಅಲ್ಲ ಆಕಾಶದಲ್ಲಿ ಹಾರಾಡಲು ಅವಕಾಶವಿರಲಿಲ್ಲ. ಗುಬ್ಬಚ್ಚಿ ಗೂಡುಗಳನ್ನು,