ನನಗೆ ಕೆಲವೊಬ್ಬರು ಹೇಳ್ತಿರ್ತಾರೆ "ಅವನು ಪರೀಕ್ಷೆಯಲ್ಲಿ ಫೇಲಾದ", ನನ್ನ ಪ್ರಶ್ನೆ "ಪ್ರತಿಸಲ ಪಾಸಾಗಬೇಕಂತ ಏನಾದ್ರೂ ರೂಲ್ ಇದೆಯಾ?"
ಕೆಲವರು ಹೇಳ್ತಾರೆ" ನನ್ನ ಹುಡುಗ/ಹುಡುಗಿ ಬಿಟ್ಟೋದನು/ಳು", ಆಗ ನನ್ನ ಪ್ರಶ್ನೆ" ಅಲ್ಲ ಸ್ವಾಮಿ ಎಲ್ಲ ಕಡೆ ಯಶಸ್ವಿ ಸಂಬಂಧಗಳೇ ಇರಬೇಕಂತ ರೂಲ್ ಏನಾದ್ರೂ ಇದೆಯಾ?"
ಕೆಲವರು ಕೇಳ್ತಾರೆ "ಯಾಕೆ ಖಿನ್ನನಾಗಿದಿಯಾ?" ನನ್ನ ಪ್ರಶ್ನೆ "ಯಾವಾಗ್ಲೂ ನಗ್ತಾನೇ ಇರಬೇಕಂತ ರೂಲ್ ಇದೆಯಾ?"
ಕೆಲವರು ಅಳ್ತಾರೆ "ನನ್ನ ತೀರ್ಮಾನ ಸರಿಯಾಗಿರಲಿಲ್ಲ?" ಆಗ "ಎಲ್ಲ ತೀರ್ಮಾನಗಳನ್ನು ಸರಿಯಾಗಿಯೇ ತೆಗೆದುಕೊಳ್ಳಲಿಕ್ಕೆ ಸಾಧ್ಯಾನಾ?"
ಏನಂತ ಅಂದರೆ ನಮ್ಮ ಜೀವನ ಯಾವಾಗಲೂ ಪರಿಪೂರ್ಣ/ಶಾಶ್ವತವಾಗಿ ಇರಬೇಕೆಂಬ ನಿರೀಕ್ಷೆ ನಮ್ಮ ಅಸಂತೋಷಕ್ಕೆ ಬಹುದೊಡ್ಡ ಕಾರಣ, ಈ ಸೃಷ್ಟಿಯಲ್ಲಿ ಯಾವುದೂ ಶಾಶ್ವತವಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಪ್ರತಿ ಕಗ್ಗತ್ತಲ ಇರುಳಿನ ನಂತರವೂ ಪ್ರಕಾಶಮಾನವಾದ ಹಗಲಿದೆ, ಪ್ರತಿ ಸಾವಿಗೂ ಬದಲಾಗಿ ಹೊಸ ಹುಟ್ಟಿದೆ, ಪೂರ್ಣಚಂದ್ರನ ಉದಯದ ಮೊದಲು ಶೂನ್ಯದಿಂದ ಆರಂಭವಾಗುವ ಹಂತಗಳಿವೆ, ಸೃಷ್ಟಿಯ ಅಪರಿಪೂರ್ಣತೆಯಲ್ಲೂ ನಮಗರ್ಥವಾಗದ ಪರಿಪೂರ್ಣತೆ ಅಡಗಿದೆ, ಆದ್ದರಿಂದ ನಾವು ನಮ್ಮ ಬದುಕಿನ ಕೆಟ್ಟ /ಅಪರಿಪೂರ್ಣ ಅಂಶಗಳನ್ನೇ ತೀರಾ ಹಚ್ಚಿಕೊಳ್ಳಬಾರದು. ದೇವರಿಗೂ ಕೂಡ ನಿಮಗೆ ಕೆಟ್ಟದ್ದು ಮಾಡಬೇಕೆಂಬ ಮನಸಿರುವುದಿಲ್ಲ ಆದರೆ ಅಡೆತಡೆಗಳೂ ಜೀವನಚಕ್ರದ ಹಂತಗಳು; ಈಸಲೇಬೇಕು ಇದ್ದು ಜಯಿಸಲೇಬೇಕು. ಪ್ರತಿ ಸೋಲಿನ ನಂತರವೂ ಹೊಸ ಯುದ್ಧಕ್ಕೆ ಸಿದ್ಧರಾಗಬೇಕು ಯಾಕೆಂದರೆ ಸೋಲುಗಳೂ ಶಾಶ್ವತವಲ್ಲ.......!
ಶುಭ ರಾತ್ರಿ ✍️ಆನಂದ ಬಿ. ಯು
Comments
Post a Comment